janadhvani

Kannada Online News Paper

ರಹೀಂ ಮನೆಗೆ ಸುನ್ನಿ ಕೋ ಆರ್ಡಿನೇಷನ್ ನಾಯಕರ ಭೇಟಿ- ಧನ ಸಹಾಯ ಹಸ್ತಾಂತರ

ಕೂಡಲೇ ಹಂತಕರ ಪಟ್ಟಿಯಲ್ಲಿ ದ್ವೇಷ ಭಾಷಣಗಾರರನ್ನೂ ಒಳಪಡಿಸಿ ಜೈಲಿಗಟ್ಟಬೇಕು ಎಂದು ಸಮಿತಿಯ ನಾಯಕರು ಆಗ್ರಹಿಸಿದ್ದಾರೆ.

ಬಂಟ್ವಾಳ : ಕೊಳತ್ತಮಜಲಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ರಹೀಂ ಮನೆಗೆ ಸುನ್ನಿ ಕೋ ಆರ್ಡಿನೇಷನ್ ಬೆಳ್ತಂಗಡಿ ತಾಲೂಕು ಸಮಿತಿ ನಾಯಕರು ಭೇಟಿ ನೀಡಿ ದುಆ ಮಜ್ಲಿಸ್ ನಡೆಸಿದರು.ಅಲ್ಲದೆ ಆರ್ಥಿಕವಾಗಿ 50 ಸಾವಿರ ಚೆಕ್ ಹಾಗೂ ರೇಷನ್ ಕಿಟ್ ನೀಡಿ ಸಹಕರಿಸಲಾಯಿತು.

ಈ ಕೊಲೆಗೆ ದ್ವೇಷ ಭಾಷಣವೇ ಮೂಲ ಕಾರಣ ಎಂದು ನಾಯಕರ ಒಕ್ಕೊರಲ ಹೇಳಿಕೆ ಕೇಳಿ ಬಂತು. ಕೂಡಲೇ ಹಂತಕರ ಪಟ್ಟಿಯಲ್ಲಿ ದ್ವೇಷ ಭಾಷಣಗಾರರನ್ನೂ ಒಳಪಡಿಸಿ ಜೈಲಿಗಟ್ಟಬೇಕು ಎಂದು ಸಮಿತಿಯ ನಾಯಕರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ನಿರ್ದೇಶಕರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್, ಸಯ್ಯಿದ್ ಸಲಾಂ ತಂಙಳ್ ಪೂಂಜಾಲ್ಕಟ್ಟೆ , ಅಧ್ಯಕ್ಷರಾದ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಉಳ್ತೂರು, ಕಾರ್ಯಾಧ್ಯಕ್ಷರಾದ ಉಮರ್ ಜಿ ಕೆ ಗುರುವಾಯನಕೆರೆ , ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ, ಕೋಶಾಧಿಕಾರಿ ಮುಹಮ್ಮದ್ ರಫಿ ಬೆಳ್ತಂಗಡಿ ಉಪಾಧ್ಯಕ್ಷರಾದ ಅಸ್ಸಯ್ಯಿದ್ ಎಸ್ ಎಮ್ ಕೋಯ ತಂಙಳ್ ಉಜಿರೆ, ಅಬ್ದುರ್ರಝಾಖ್ ಸಖಾಫಿ ಮಡಂತ್ಯಾರು, ಕಾರ್ಯದರ್ಶಿಗಳಾದ ಉಮರ್ ಕುಂಞಿ ನಾಡ್ಜೆ,ಅಬ್ದುರ್ರಹ್ಮಾನ್ ಸಖಾಫಿ ಆಲಂದಿಲ ಹಾಗೂ ಸದಸ್ಯರು ಗಳಾದ GM ಕುಂಞ ಜೋಗಿಬೆಟ್ಟು, ಅಬ್ಬೊನು ಮದ್ದಡ್ಕ,ಉಮರ್ ಮಾಸ್ಟರ್, ಆದಂ ಅಲ್ ಮದೀನ ,ಅಬ್ಬಾಸ್ ಬಟ್ಲಡ್ಕ, ಯಾಕುಬ್ ಮಾಪಲ, ಅಬ್ಬಾಸ್ ಕುಪ್ಪೆಟ್ಟಿ, ನಾಸಿರ್ ಪಡ್ಡಂದಡ್ಕ ಉಪಸ್ಥಿತರಿದ್ದರು.