janadhvani

Kannada Online News Paper

ವಿಟ್ಲ: ಖುರ್ರತುಸ್ಸಾದಾತ್ ಕೂರ ತಂಙಳ್ ಅನುಸ್ಮರಣೆ ಮತ್ತು ತಹ್ಲೀಲ್ ಮಜ್ಲಿಸ್

ವಿಟ್ಲ: ವಿಟ್ಲ ಝೋನ್ ಸುನ್ನೀ ಜಮ್ಇಯ್ಯತುಲ್ ಉಲಮಾ ಹಾಗೂKMJ.SYS.SMA.SJM.SSF ಇದರ ಸಂಯೋಗದಲ್ಲಿ ದಿನಾಂಕ:20/07/2024 ಶನಿವಾರ ಮಗ್ರಿಬ್ ನಮಾಝಿನ ನಂತರ ವಿಟ್ಲ ಟೌನ್ ಮಸ್ಜಿದ್ ನ ಎದುರುಗಡೆ ಬ್ರೈಟ್ ಹಾಲ್ ನಲ್ಲಿ ಖುರ್ರತುಸ್ಸಾದಾತ್ ಕೂರ ತಂಙಳ್ ಅನುಸ್ಮರಣೆ ಮತ್ತು ತಹ್ಲೀಲ್ ಮಜ್ಲಿಸ್ ಜರಗಲಿದೆ.

ಈ ಕಾರ್ಯಕ್ರಮದಲ್ಲಿ ಶೈಖುನಾ ಖುರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಸುಪುತ್ರ ಸೈಯದ್ ಅಬ್ದುರ್ರಹ್ಮಾನ್ ಮಸ್ಊದ್ ಅಲ್ ಬುಖಾರಿ ತಂಙಳ್ ನೇತೃತ್ವ ನೀಡಲಿದ್ದಾರೆ.ಪ್ರಸ್ತುತ ಕಾರ್ಯಕ್ರಮದಲ್ಲಿ ಸೈಯದ್ ಶಿಹಾಬುದ್ದೀನ್ ತಂಙಳ್ ಮದಕ ಸೈಯದ್ ಶಮೀಮ್ ತಂಙಳ್ ಟಿಪ್ಪುನಗರ ಬಹು. ಶೈಖುನಾ ವಾಲೆಮುಂಡೋವ್ ಉಸ್ತಾದ್ ,ಬಹು ಮುಹಮ್ಮದಲಿ ಸಖಾಫಿ ಅನುಸ್ಮರಣೆ ಭಾಷಣ ನಡೆಸಲಿದ್ದಾರೆ.

ಪಾಡಿ ಅಬ್ದುಲ್ ಹಮೀದ್ ಸಖಾಫಿ .KCF ರಾಷ್ಟ್ರೀಯ ನಾಯಕರಾದ ಇಬ್ರಾಹಿಂ ಹಾಜಿ ಬ್ರೈಟ್ ಹಾಗೂ ಹಲವಾರು ಉಲಮ ಉಮರಾ ರಾಜಕೀಯ ಸಾಮಾಜಿಕ ಸುನ್ನೀ ಸಂಘಟನೆಗಳ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಕೊನೆಯಲ್ಲಿ ಅನ್ನದಾನ ಜರಗಳಿಗೆ ಪ್ರಸ್ತುತ ಕಾರ್ಯಕ್ರಮದಲ್ಲಿ ಎಲ್ಲಾ ಸುನ್ನಿ ಕಾರ್ಯಕರ್ತರು ಸಾರ್ವಜನಿಕರು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಅನುಸ್ಮರಣ ಸ್ವಾಗತ ಸಮಿತಿ ವರ್ಕಿಂಗ್ ಚೈರ್ಮೇನ್ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com