janadhvani

Kannada Online News Paper

ಬೆಂಗಳೂರು ಸಅದಿಯ ಸಮಿತಿ ಪುನರ್ರಚನೆ

ಬೆಂಗಳೂರು: ಸಮನ್ವಯ ಶಿಕ್ಷಣರಂಗದಲ್ಲಿ ಕ್ರಾಂತಿ ಸೃಷ್ಟಿಸಿ,ಸ್ಲಮ್ನಲ್ಲಿ ಜೀವನ ನಡೆಸುತ್ತಿರುವ ಮುಸ್ಲಿಂ ಕುಟುಂಬಗಳಿಗೆ ಆಸರೆಯಾಗಿ ಮುನ್ನುಗ್ಗಿ ಇದೀಗ ೨೦ ಸಂವತ್ಸರಗಳನ್ನು ಪೂರೈಸುತ್ತಿರುವ ಬೆಂಗಳೂರು ಸಅದಿಯಾ ಎಜುಕೇಶನಲ್ ಫೌಂಡೇಶನ್ ಕೇಂದ್ರ ಸಮಿತಿಯನ್ನು ಪುನರ್ರಚಿಸಲಾಯ್ತು.

ಜಾಮಿಯಾ ಸಅದಿಯ ಕಾಸರಗೋಡು ಇದರ ಪ್ರಧಾನ ಕಾರ್ಯದರ್ಶಿಯಾದ ಕುರ್ರತುಸ್ಸಾದಾತ್ ಸಯ್ಯದ್ ಫಝಲ್ ಕೋಯಮ್ಮ ತಂಙಲ್ ಅಧ್ಯಕ್ಷತೆಯಲ್ಲಿ ಬೆಂಗಳೂರು ಸಅದಿಯ ಕಛೇರಿ ಬನಶಂಕರಿಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಸಮಿತಿಯನ್ನು ಪುನರರ್ರಚಿಸಲಾಯ್ತು.

ಅದ್ಯಕ್ಷರಾಗಿ ಸಯ್ಯಿದ್ ಕೆ ಎಸ್ ಆಟ್ಟಕೋಯ ತಂಙಲ್ ಕುಂಬೋಳ್,ಉಪಾದ್ಯಕ್ಷರಾಗಿ ಸಯ್ಯದ್ ಫಝಲ್ ಕೋಯಮ್ಮ ತಂಙಲ್ ಕೂರ,ಪ್ರಧಾನ ಕಾರ್ಯದರ್ಶಿಯಾಗಿ ಎನ್ಕೆ ಎಂ ಶಾಫಿ ಸಅದಿ,ಕೋಶದಿಕಾರಿಯಾಗಿ ಹಾಜಿ ಅಬ್ದುಲ್ ಹಮೀದ್.

ಸೆಕ್ರೆಟರಿಯಾಗಿ ಇಸ್ಮಾಯಿಲ್ ಸಅದಿ ಕಿನ್ಯಾ ಹಾಗೂ ಶುಕೂರ್ ಹಾಜಿ, ಓ. ಪಿ ಮೊಯ್ದೀನ್ ಹಾಜಿ, ಮಹ್ಮೂದ್ ಹಾಜಿ ಪಿ ಕೆ,ಯಾಕೂಬ್ ಯೂಸೂಫ್, ಹಾಜಿ ಎಂ. ಕೆ ಹನೀಫ್ ,ಹಾಜಿ ಇಬ್ರಾಹಿಂ ವಿಲ್ಲೇಜ್, ಮುಹಮ್ಮದ್ ಅಲಿ ಸಖಾಫಿ ತ್ರಿಕಾರಿಪುರ್,ಅಬ್ದುಲ್ ಕಾದರ್ ಮದನಿ ಪಲ್ಲಂಗೋಡ್, ಸುಹೈಲ್ ಅಹ್ಮದ್ ಪ್ರೆಸಿಡೆನ್ಸಿ,ಉಮರ್ ಹಾಜಿ ಅಭಿಮಾನ್, ಕಲಂದರ್ ಉಸ್ಮಾನ್ ಮಿತ್ತೂರ್,ವಹೀದ್ ಖೈರ್ಖಾನ್, ತಾಹೀರ್ ಯೂಸುಫ್, ನೌಫಲ್ ಎನ್ ಎಂ, ಬಶೀರ್ ಸಅದಿ ಕರಾಯ,ಬಶೀರ್ ಸಅದಿ ವಿರಾಜಪೇಟೆ, ಎನ್ ಅಬ್ದುಲ್ ಹಕೀಮ್ ಆರ್ ಟಿ ನಗರ್,ರಿಯಾಜ್ ಸುಲ್ತಾನ್ ಗೋಲ್ಡ್,ಅಬ್ದುಲ್ ಹಮೀದ್ ಹಾಜಿ ಬೈತಡ್ಕ,ಅಬ್ದುಲ್ ಲತೀಫ್ ಅಸ್ಅದಿ,ಅಬ್ದುಲ್ ಸಲೀಂ ಅಸ್ಅದಿ,ಶಾಫಿ ಅಸ್ಅದಿ,ನಿಜಾಸ್ ಅಥಾನಿಕಲ್, ಸಿಖಂದರ್ ಯಾರಬ್ ನಗರ್, ತನ್ವೀರ್ ಅಹ್ಮದ್, ತಸ್ಲೀಲ್ ಅಹ್ಮದ್,ಸುಲೈಮಾನ್ ನಿಸಾರ್,ಮುಂತಾದವರನ್ನು ಕಾರ್ಯಕಾರಿಣಿ ಸಮಿತಿಗೆ ಆಯ್ಕೆ ಮಾಡಲಾಯ್ತು.