janadhvani

Kannada Online News Paper

ರಘು ಅಂಥವರು ನಾಗರಿಕ ವಾಸಕ್ಕೆ ಯೋಗ್ಯರಲ್ಲ, ಗಡೀಪಾರು ಮಾಡಿ- ಕೆ.ಅಶ್ರಫ್

ಮುಸ್ಲಿಮರು ತರಕಾರಿ, ಮೀನು ಮಾರಾಟಕ್ಕೆ ಹಿಂದೂಗಳ ಮನೆಗೆ ಬಂದರೆ ಗುಂಡಿಕ್ಕಿ ಸಾಯಿಸಿ ಎಂಬಿತ್ಯಾದಿಯಾಗಿ ಹೇಳಿಕೆ ನೀಡಿದ್ದ ರಘು

ಮಂಗಳೂರು: ಪ್ರಚೋದನಕಾರಿ ಭಾಷಣದ ಮೂಲಕ ಸಮಾಜದಲ್ಲಿ ಶಾಂತಿ ಕದಡುವ, ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ದ್ವೇಷ ಹುಟ್ಟುವಂತಹ ವಾತಾವರಣ ಸೃಷ್ಟಿ ಮಾಡುವ ಬಜರಂಗದಳದ ರಘು ಸಕಲೇಶಪುರ ಅಂಥವರು ನಾಗರಿಕ ವಾಸಕ್ಕೆ ಯೋಗ್ಯರಲ್ಲ. ಅಂಥವರನ್ನು ಗಡೀಪಾರು ಮಾಡಬೇಕೂ ಎಂದು ದ. ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಆಗ್ರಹಿಸಿದ್ದಾರೆ.

ರಘು, ಇತ್ತೀಚೆಗೆ ಸಕಲೇಶಪುರ ತಾಲೂಕಿನಲ್ಲಿ ನಡೆದ ಸಂಘಟನೆಯ ಸಭೆಯೊಂದರಲ್ಲಿ ಮುಸ್ಲಿಮರ ವಿರುದ್ಧ ನಿಂದನಾತ್ಮಕ , ಅವಹೇಳನಕಾರಿಯಾಗಿ ಹಾಗೂ ಮುಸ್ಲಿಮರು ತರಕಾರಿ, ಮೀನು ಮಾರಾಟಕ್ಕೆ ಹಿಂದೂಗಳ ಮನೆಗೆ ಬಂದರೆ ಗುಂಡಿಕ್ಕಿ ಸಾಯಿಸಿ ಎಂಬಿತ್ಯಾದಿಯಾಗಿ ಹೇಳಿಕೆ ನೀಡಿ ಮತೀಯ ವಿದ್ವೇಶ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಭಾಷಣ ಮಾಡಿರುತ್ತಾರೆ.

ರಘುವಿನಂತಹ ದುಷ್ಕರ್ಮಿಗಳು ಈ ಸಮಾಜದಲ್ಲಿ ಇರುವವರೆಗೂ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಸೃಷ್ಟಿಯಾಗುತ್ತಲೇ ಇರುತ್ತದೆ.
ಸರಕಾರ, ಜಿಲ್ಲಾಡಳಿತ ಮತ್ತು ಪೊಲೀಸು ಇಲಾಖೆ ಪ್ರಕರಣ ದಾಖಲಿಸಿ ರಘುನಂತವರನ್ನು ಗಡೀಪಾರು ಗೊಳಿಸಬೇಕು. ರಘು ನಂತವರು ಈ ನಾಗರಿಕ ಸಮಾಜದಲ್ಲಿ ವಾಸ ಇರಲು ಯೋಗ್ಯರಲ್ಲ ಮತ್ತು ಅರ್ಹರಲ್ಲ ಎಂದು ಕೆ.ಅಶ್ರಫ್(ಮಾಜಿ ಮೇಯರ್)
ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com