janadhvani

Kannada Online News Paper

ಸಾಮರಸ್ಯದ ಉಳಿವು ಅನಿವಾರ್ಯ- ಮುಖ್ಯಮಂತ್ರಿಯನ್ನು ಭೇಟಿಯಾದ ಇಕ್ಬಾಲ್ ಬಾಳಿಲ

ಹೊಸ ಸರಕಾರದ ಮೇಲೆ ಜನರಿಗೆ ತುಂಬಾ ನಿರೀಕ್ಷೆಯಿದೆ. ನಿರೀಕ್ಷೆಯಂತೆ ಮುನ್ನಡೆಯಲು ಮನವಿ

ಬೆಂಗಳೂರು: ಸಂಸ್ಕೃತಿಯ ನೆಲೆಬೀಡಾಗಿರುವ ಕರುನಾಡು ಕೋಮುವಾದಗಳಿಂದ ತತ್ತರಿಸಿ ಹೋಗಿವೆ. ಅದನ್ನು ಸಂಪೂರ್ಣ ನಿರ್ನಾಮ ಗೊಳಿಸುವುದಕ್ಕೆ ಸರ್ಕಾರವು ಮೊದಲ ಆದ್ಯತೆ ನೀಡಬೇಕಿದೆಯೆಂದು SKSSF ರಾಜ್ಯ ನಾಯಕ, ಕರ್ನಾಟಕ ಭಾವೈಕ್ಯತಾ ಪರಿಷತ್ ದ.ಕ ಜಿಲ್ಲಾದ್ಯಕ್ಷ ಇಕ್ಬಾಲ್ ಬಾಳಿಲ ಆಗ್ರಹಿಸಿದ್ದಾರೆ.

ಅವರು ಇಂದು ಮುಖ್ಯಮಂತ್ರಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮನವಿಯೊಂದನ್ನು ಸಲ್ಲಿಸಿದ್ದಾರೆ.

ಪ್ರತೇಕವಾಗಿ ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ, ಆರೋಗ್ಯ, ಸ್ವಚ್ಚತೆ, ಧಾರ್ಮಿಕ ಆಚರಣೆಗಳ ಮೂಲಕ ಅತ್ಯಂತ ಗೌರವ ಉಳಿಸಿಕೊಂಡ ಜಿಲ್ಲೆ. ಆದರೆ ಕೆಲವು ವರ್ಷಗಳಿಂದ ಕೋಮುವಾದ ಮತ್ತು ಮಾದಕ ವ್ಯಸನವು ವ್ಯಾಪಕವಾಗಿ ಹರಡಿ ಜಿಲ್ಲೆಯನ್ನು ತಲೆತಗ್ಗಿಸುವಂತೆ ಮಾಡಿದೆ.
ಇದರಿಂದ ಸಮಾಜ ಹೊರ ಬರಬೇಕಾದದ್ದು ಕಾಲದ ಬೇಡಿಕೆಯಾಗಿವೆ. ಆದ್ದರಿಂದ ಸರಕಾರವು ಸೌಹಾರ್ದತೆಗಾಗಿ ಹೆಚ್ಚಿನ ಪ್ರಯತ್ನಗಳನ್ನು ನಡೆಸಬೇಕಾಗಿದೆ.

ಸೇವಾರಂಗದಲ್ಲಿ ಕ್ರಾಂತಿಯ ಹೆಜ್ಜೆ ಹಾಕಿರುವ SKSSF ಸಂಘಟನೆಯು ಸೌಹಾರ್ದತೆಯ ಉಳಿವಿವಾಗಿ ಪ್ರತೀ ವರ್ಷವೂ ನೂರಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ
ಪ್ರತೇಕವಾಗಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನದಂದು ಸಾವಿರಾರು ಜನರನ್ನು ಸೇರಿಸಿ ಅದ್ಭುತ ಕಾರ್ಯಕ್ರಮ ನೀಡುವ ಮೂಲಕ ಕೋಮುವಾದ ಮಾದಕ ವ್ಯಸನ ನಿರ್ನಾಮಕ್ಕಾಗಿ ಪ್ರಯತ್ನಿಸಲಾಗಿದೆ. ಆದರೂ ಸಂಪೂರ್ಣ ಕಡಿವಾಣ ಬೀಳಬೇಕಾದ ಅನಿವಾರ್ಯತೆಯಿದೆ.

ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಾದದ್ದು ಸರಕಾರದ ಜವಾಬ್ದಾರಿಯಾಗಿರುತ್ತದೆ. ಅದಕ್ಕಾಗಿ ಪ್ರತೇಕ ನಿಗಮಗಳನ್ನು ರಚಿಸುವಂತೆಯೂ ಮನವಿಯಲ್ಲಿ ಕೋರಲಾಗಿವೆ. ಹೊಸ ಸರಕಾರದ ಮೇಲೆ ಜನರಿಗೆ ತುಂಬಾ ನಿರೀಕ್ಷೆಯಿದೆ. ನಿರೀಕ್ಷೆಯಂತೆ ಮುನ್ನಡೆಯಲು ಮನವಿ ನೀಡಿರುತ್ತಾರೆ.

error: Content is protected !! Not allowed copy content from janadhvani.com