janadhvani

Kannada Online News Paper

ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ನಿಷೇಧ: ಸಂಘೀ ಮಳಿಗೆಗಳಲ್ಲಿ ಮುಸ್ಲಿಮ್ ಗ್ರಾಹಕರನ್ನೂ ನಿಷೇಧಿಸಲಿ

ಮುಸ್ಲಿಮರೊಂದಿಗೆ ವ್ಯವಹಾರ ನಿಲ್ಲಿಸುವುದು, ಉಪವಾಸ ಇರುವುದು ಎರಡೂ ಒಂದೇ ಎಂಬ ಸ್ಥಿತಿಗೆ ತಳ್ಳುವಂತಾಗದಿರಲಿ

ಮಂಗಳೂರು: ಇತ್ತೀಚೆಗಷ್ಟೇ ಪ್ರವೀಣ್ ತೊಗಾಡಿಯಾ ಮುಸ್ಲಿಮ್ ಹೊರತಾದ ಸಂವಿಧಾನದ ಬಗ್ಗೆ ಹೇಳಿಕೆ ಕೊಟ್ಟು ನಗೆಪಾಟಲಿಗೀಡಾದ ಬೆನ್ನಿಗೇ,ಮಂಗಳೂರಿನ ಕದ್ರಿ ಕ್ಷೇತ್ರದ ಜಾತ್ರೆಯ ಹೊರಾಂಗಣದಲ್ಲಿ ಸಂಘ ಪರಿವಾರವು ಮುಸ್ಲಿಮ್ ವರ್ತಕರಿಗೆ ನಿಷೇಧದ ಫಲಕ ಅಳವಡಿಸಿದೆ!.ಸಂಘ ಪರಿವಾರ ಇನ್ನೂ ಕೂಡಾ ತನ್ನ ಎಂದಿನ ಚಾಳಿಯಾದ ಮುಸ್ಲಿಮ್ ವರ್ತಕರ ಬಹಿಷ್ಕಾರ ವನ್ನು ತ್ಯಜಿಸಿದಂತೆ ಕಾಣುತ್ತಿಲ್ಲ!.

ದ.ಕ ಜಿಲ್ಲೆ ಸೇರಿದಂತೆ ರಾಜ್ಯದ ಇತರೆಡೆ ವ್ಯಾಪಾರ ವಹಿವಾಟು ನಡೆಸುವ ಸಂಘ ಪರಿವಾರದ ಪೋಷಕ ವರ್ತಕರು, ಉದ್ಯಮಿಗಳು ಸಾಧ್ಯವಾದರೆ ತಮ್ಮ ಮಳಿಗೆಗಳಿಗೆ ಮುಸ್ಲಿಮ್ ಗ್ರಾಹಕರನ್ನು ಬಹಿರಂಗವಾಗಿ ನಿಷೇಧಿಸುವ ಫಲಕಗಳನ್ನು ಅಳವಡಿಸಲಿ! ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಅವರು ಸವಾಲು ಹಾಕಿದ್ದಾರೆ.

ಬೀದಿ ವ್ಯಾಪಾರವನ್ನೇ ತಲೆಮಾರುಗಳಿಂದ ನಂಬಿ ಬಂದಿರುವ ಬೀದಿ ವರ್ಥಕರನ್ನು ನಿಷೇಧಿಸುವ ಚಾಳಿಯನ್ನು ಬದಿಗಿಟ್ಟು, ಉದ್ಯಮ ಬಹಿಷ್ಕಾರವನ್ನು ಪ್ರೋತ್ಸಾಹಿಸಿ, ರಾಜಕೀಯ ಮತ ದ್ರುವೀಕರಣ ಮಾಡುತ್ತಿರುವ ಸಂಘದ ಇತರ ಉದ್ಯಮಿಗಳಿಗೆ, ಮುಸ್ಲಿಮ್ ಗ್ರಾಹಕ ರಹಿತ ವ್ಯವಸ್ಥೆ ಏನೆಂದು ಆಗ ಅರಿವಾಗುವ ಸಾದ್ಯತೆ ಅಧಿಕ.

ಈ ದೇಶದಲ್ಲಿ ಅನಾದಿ ಕಾಲದಿಂದಲೂ ಕೊಡು, ಕೊಳ್ಳುವಿಕೆಯ ಪ್ರಭಲ ಸಂಸ್ಕೃತಿ ಯಿಂದಾಗಿ ಆರ್ಥಿಕ ವ್ಯವಹಾರ ನೆಲೆ ನಿಂತಿದೆ. ಮುಸ್ಲಿಮರೊಂದಿಗೆ ವ್ಯವಹಾರ ನಿಲ್ಲಿಸುವುದು, ಉಪವಾಸ ಇರುವುದು ಎರಡೂ ಒಂದೇ ಎಂಬ ಸ್ಥಿತಿಗೆ ತಳ್ಳುವಂತಾಗದಿರಲಿ ಎಂದು ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತಾಕೀತು ನೀಡಿದರು.