janadhvani

Kannada Online News Paper

ನಾಳೆ ನಡೆಯುವ ಬೃಹತ್ ಹಕ್ಕೊತ್ತಾಯ ಸಭೆ ಯಶಸ್ವಿಗೊಳಿಸಿ- ಎಸ್‌ವೈಎಸ್ ಈಸ್ಟ್ ಜಿಲ್ಲಾ ಸಮಿತಿ ಕರೆ

ಪುತ್ತೂರು : ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೊಂಡು ಪದೇಪದೇ ಕೊಲೆ,ಆಕ್ರಮಣ,ನೈತಿಕ ಪೋಲಿಸ್ ಗಿರಿ ನಿರಂತರವಾಗಿ ನಡೆಯುತ್ತಿದೆ. ಮುಸ್ಲಿಂ ಯುವಕರ ಮೇಲೆ ದೌರ್ಜನ್ಯ, ಪೊಲೀಸ್ ಅಧಿಕಾರಿಗಳ ದರ್ಪ, ಕೋಮುವಾದಿಗಳ ಅಟ್ಟಹಾಸ ಮಿತಿ ಮೀರುತ್ತಿದೆ. ನ್ಯಾಯ ನೀಡಬೇಕಾದ ಅಧಿಕಾರಿಗಳು ಇದರ ಕುರಿತು ಕಾಳಜಿ ವಹಿಸದೆ ಒಂದು ಸಮುದಾಯವನ್ನು ನ್ಯಾಯದ ವಿಷಯದಲ್ಲಿ ಕಡೆಗಣಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಹಕ್ಕನ್ನು ಕಸಿಯುವ ಪ್ರಯತ್ನವಾಗಿದೆ.

ಈ ವಿಷಯವನ್ನು ಪ್ರತಿಪಾದಿಸಿ ನ್ಯಾಯಕ್ಕಾಗಿ ಸುನ್ನಿ ಸಂಘಟನೆಗಳ ವತಿಯಿಂದ ನಾಳೆ ಮಧ್ಯಾಹ್ನ 3:00 ಗಂಟೆಗೆ ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಸಭೆ ನಡೆಯುವಾಗ ಎಸ್‌ವೈಎಸ್ ಈಸ್ಟ್ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸೆಂಟರ್, ಬ್ರಾಂಚ್ ಕಾರ್ಯಕರ್ತರು, ಹಿತೈಷಿಗಳು ಅತ್ಯಂತ ಶಾಂತಿ ಹಾಗೂ ಶಿಸ್ತಿನಿಂದ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಸ್‌ವೈಎಸ್ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಸ‌ಅದಿ ಮಜೂರುರವರು ಕರೆ ನೀಡಿದ್ದಾರೆ.

error: Content is protected !! Not allowed copy content from janadhvani.com