janadhvani

Kannada Online News Paper

ಮಾರ್ವಾಡೀಕರಣ ಗೊಂಡ ಬೀಫ್ ರಫ್ತು ಕಂಪೆನಿಗಳನ್ನು ಭರತ್ ಶೆಟ್ಟಿ ಮುಟ್ಟುಗೋಲು ಗೊಳಿಸಲಿ- ಮುಸ್ಲಿಮ್ ಒಕ್ಕೂಟ

ಮಾರವಾಡಿ, ಬನಿಯ, ಬ್ರಾಹ್ಮಣ ವರ್ಗ ಪಶು ಮಾಂಸವನ್ನು ವಿದೇಶಕ್ಕೆ ರಫ್ತು ಮಾಡಿ ಮಿಲಿಯನ್ ಗಟ್ಟಲೆ ಲಾಭ ಪಡೆಯುತ್ತಿದೆ.

ಮಂಗಳೂರು: ಈ ದೇಶದ ಪ್ರತಿ ದುಡಿಯುವ, ಕೃಷಿಕರ, ಹೈನುಗಾರರ ಪ್ರತಿ ಆದಾಯವು ಪ್ರತಿ ಧರ್ಮದ ಹಬ್ಬಗಳನ್ನು ಅವಲಂಭಿಸಿದೆ. ಮುಸ್ಲಿಮರ ಹಬ್ಬದಿಂದ ಈ ದೇಶದ ರೈತಾಪಿ ವರ್ಗಕ್ಕೆ ಒಂದೇ ದಿವಸದಲ್ಲಿ ನಾಲ್ಕು ಲಕ್ಷ ಕೋಟಿ ವ್ಯವಹರಣೆ ಮೊತ್ತದ ಪಾಲಿನ ಆದಾಯವು ಪಾವತಿಯಾಗುತ್ತಿದೆ.

ಆರ್. ಎಸ್. ಎಸ್ ಗೆ ಫಂಡಿಂಗ್ ಮಾಡುವ ಮಾರವಾಡಿ ಒಡೆತನದ ಅದೆಷ್ಟೋ ಬೀಫ್ ರಫ್ತು ಕಂಪೆನಿಗಳು ಇಂದು ಗೋಹತ್ಯೆ ವಿರೋಧಿ ಅಭಿಯಾನದ ಹೆಸರಿನಲ್ಲಿ, ರೈತರ ಮೂಲ ಆದಾಯದ ಹೈನು ಶೇಷ ಗೋವನ್ನು ಸ್ಥಳೀಯವಾಗಿ ಮಾರಾಟ ಮಾಡುವುದನ್ನು ತಡೆಯುವ ಕಾನೂನನ್ನು ಜಾರಿಗೆ ತಂದು ರೈತರಿಗೆ ಅನ್ಯಾಯ ಮಾಡಿ, ಮಾರವಾಡಿ, ಬನಿಯ, ಬ್ರಾಹ್ಮಣ ವರ್ಗ ಪಶು ಮಾಂಸವನ್ನು ವಿದೇಶಕ್ಕೆ ರಫ್ತು ಮಾಡಿ ಮಿಲಿಯನ್ ಗಟ್ಟಲೆ ಲಾಭ ಪಡೆಯುತ್ತಿದೆ.

ಹಾಲು, ಮತ್ಸ್ಯ, ಮೊಸರು ಉತ್ಪನ್ನಗಳಿಗೆ ಜಿ. ಎಸ್.ಟಿ ಜಾರಿಗೆ ತಂದು ಹಾಲು ಉತ್ಪಾದಕರ, ರೈತರ, ಮೀನುಗಾರರ, ಆದಾಯಕ್ಕೂ ಕತ್ತರಿ ಹಾಕುವ ವ್ಯವಸ್ಥೆ ಆರಂಭವಾಗಿದೆ.ಕೇಂದ್ರ ಮತ್ತು ರಾಜ್ಯ ಸರಕಾರ ಮಾರ್ವಾಡಿ, ಬನಿಯ, ಬ್ರಾಹ್ಮಣರ ನಿಯಂತ್ರಣದಲ್ಲಿದೆ.

ಭಾರತದ ವಾಣಿಜ್ಯ ವ್ಯವಸ್ಥೆ ಮಾರ್ವಾಡಿಕರಣ ಗೊಂಡಿದೆ. ಭಾರತ ಯೋಗಕ್ಷೇಮ ರಾಷ್ಟ್ರ ಪದ್ಧತಿಯಿಂದ ಜಾರಿ ವ್ಯವಹಾರಿಕ ದೇಶವಾಗಿ ಪರಿವರ್ತನೆ ಗೊಂಡಿದೆ. ಸರಕಾರ ವ್ಯಾಪಾರ ಮಳಿಗೆ ತೆರೆದು ನಲವತ್ತು ಶೇಕಡ ಕಮಿಷನ್ ಆಧಾರದಲ್ಲಿ ತನ್ನ ರಾಜಕಾರಣಿ ಧಣಿಗಳಿಗೆ ಆದಾಯ ಸ್ಥಾಪಿಸಿದೆ. ಪ್ರಜೆಗಳನ್ನು ಗಿರಾಕಿಗಳನ್ನಾಗಿ ಮಾಡಲಾಗಿದೆ. ಕೈಯಲ್ಲಿ ಹಣ ಇಲ್ಲದವ ಗುಲಾಮಗಿರಿ ಮಾಡಬೇಕಾಗುತ್ತದೆ.

ಭರತ್ ಶೆಟ್ಟಿ ಇನ್ನಾದರೂ ಖುರ್ಬಾನಿ ಯ ಬಗ್ಗೆ ಮಾತನಾಡುವ ಬದಲು ಈ ದೇಶ ಮಾರ್ವಾಡಿಕರಣ ಗೊಂಡ ಬಗ್ಗೆ ಮತ್ತು ಬೀಫ್ ರಫ್ತು ಕಂಪೆನಿಗಳನ್ನು ಮುಟ್ಟುಗೋಲು ಗೊಳಿಸುವ ಬಗ್ಗೆ ಮಾತನಾಡಲು ಕಲಿಯಲಿ.

ಕೆ.ಅಶ್ರಫ್.
ಅಧ್ಯಕ್ಷರು.ಡ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.