janadhvani

Kannada Online News Paper

ಕೆಸಿಎಫ್ ಫಹಾಹೀಲ್ ಸೆಕ್ಟರ್ ನಿಂದ ಬೃಹತ್ ಇಫ್ತಾರ್ ಕೂಟ ಹಾಗೂ ಸ್ವಲಾತ್ ಮಜ್ಲಿಸ್

ಕೆಸಿಎಫ್ ಕುವೈಟ್ ಸೌತ್ ಝೋನ್ ಅಧೀನ ದ ಕೆಸಿಎಫ್ ಫಹಾ ಹೀಲ್ ಸೆಕ್ಟರ್ ವತಿಯಿಂದ ಬ್ರಹತ್ ಇಫ್ತಾರ್ ಕೂಟ, ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ರಮ್ಲಾನ್ ವಿಶೇಷ ಸಂದೇಶ ಫಹಾಹೀಲ್ ಸೆಕ್ಟರ್ ಅಧ್ಯಕ್ಷ ಜನಾಬ್ ಸಿರಾಜ್ ಇಂಜಿನಿಯಯರ್ ರವರ ಅಧ್ಯಕ್ಷತೆಯಲ್ಲಿ ಬಹಳ ವಿಜೃಂಭಣೆ ಯಿಂದ ನಡೆಯಿತು.

15/4/2022 ರಂದು ಕೆಸಿಎಫ್ ಫಹಾಹೀಲ್ ಸೆಕ್ಟರ್ ಕಚೇರಿಯಲ್ಲಿ ಬಹುಮಾನ್ಯ ಉಮರುಲ್ ಫಾರೂಕ್ ಸಖಾಫಿ ಉಸ್ತಾದರ ನೇತ್ರತ್ವದಲ್ಲಿ ಸ್ವಲಾತ್ ಹಾಗೂ ಇಫ್ತಾರ್ ಕೂಟ ನಡೆಯಿತು. ಕಾರ್ಯಕ್ರಮದಲ್ಲಿ ರಂಜಾನ್ ಸಂದೇಶ ವನ್ನು ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ಶಿಕ್ಷಣ ಅಧ್ಯಕ್ಷರಾದ ಬಹುಮಾನ್ಯ ಬಾದುಶಾ ಸಖಾಫಿ ಉಸ್ತಾದರು ರಂಜಾನ್ ಸಂದೇಶವನ್ನು ಸಾರಿದರು.

ಕಾರ್ಯಕ್ರಮದಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹುಮಾನ್ಯ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದ್ ಮತ್ತು ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ಸಾಂತ್ವನ ಅಧ್ಯಕ್ಷರಾದ ಯಾಕೂಬ್ ಕಾರ್ಕಳ ಫರ್ವಾನಿಯ ಸೆಕ್ಟರ್ ಅಧ್ಯಕ್ಷರು ಆದ ಇಕ್ಬಾಲ್ ಎಡಪದವು ಹಾಗೂ ರಾಷ್ಟ್ರೀಯ, ಝೋನ್, ಹಾಗೂ ಸೆಕ್ಟರ್ ನಾಯಕರು ಭಾಗವಹಿಸಿದರು.ಕೊನೆಯಲ್ಲಿ ಫಾಹಾಹೀಲ್ ಸೆಕ್ಟರ್ ಕಾರ್ಯದರ್ಶಿ ಜನಾಬ್ ಶಂಸುದ್ದೀನ್ ಬೆಜ್ಜವಳ್ಳಿ ಧನ್ಯವಾದ ಗೈದರು.