ಮಂಗಳೂರು :ಹಿಜಾಬ್ ಮತ್ತು ಸಮವಸ್ತ್ರ ಸಂಬಂಧಿಸಿ ಶಿವಮೊಗ್ಗದಲ್ಲಿ ಶಾಲೆಗೆ ಹೋಗುವ ವಿಧ್ಯಾರ್ಥಿನಿಯೋರ್ವಳನ್ನ ದೃಶ್ಯ ಮಾಧ್ಯಮ ವರದಿಗಾರ ಹಿಂಬಾಲಿಸಿ,ಅಟ್ಟಾಡಿಸಿ ಚಿತ್ರೀಕರಣ ನಡೆಸಿ ವಿಧ್ಯಾರ್ಥಿಯ ಖಾಸಗಿ ಹಕ್ಕುಗಳನ್ನು ಉಲ್ಲಂಘಿಸಿರುವುದು ಖಂಡನೀಯ.
ಪ್ರಜಾ ಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾದ ಮಾಧ್ಯಮ, ಇಂದು ಧಾರ್ಮಿಕ ಮೂಲಭೂತ ಹಕ್ಕು ಆದ ಮಹಿಳೆಯರ ಖಡ್ಡಾಯ ಹಿಜಾಬ್ ವಿಷಯವು ವಿವಾದದಲ್ಲಿರುವಾಗ,ಹಿಜಾಬ್ ಧರಿಸುವಿಕೆಯನ್ನು ಅಪರಾಧವೆಂದು ಬಿಂಬಿಸುವ ಪ್ರಯತ್ನಕ್ಕೆ ಇಳಿದಿದೆ. ಮಾಧ್ಯಮ ವರದಿಗಾರರು ವಿದ್ಯಾರ್ಥಿನಿಯನ್ನು ಅಟ್ಟಾಡಿಸಿ ಚಿತ್ರೀಕರಣ ಮಾಡುವ ಅವಶ್ಯಕತೆ ಏನಿತ್ತು?
ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ಜನಾಂಗೀಯ ಮುಜುಗರ ಸೃಷ್ಟಿಸಿದರೆ ಅದರ ಪರಿಣಾಮ ವ್ಯತ್ಯಯ ವಾಗಬಹುದು. ಹಿಜಾಬ್ ಧರಿಸುವಿಕೆ ಸಾಮಾನ್ಯ ವಿಷಯ ಅದನ್ನು, ಈ ರೀತಿ ಮಾಡುವ ಅಗತ್ಯತೆ ಇರಲಿಲ್ಲ. ಇಂತಹ ಕಿರಣ್ ಕಾಂಕಾರಿ ಎಂಬ ವರದಿಗಾರನ ಕೋಮು ಮನಸ್ಥಿತಿಯಿಂದ ಇಡೀ ಮಾಧ್ಯಮ ರಂಗವು ತಲೆ ತಗ್ಗಿಸುವಂತಾಗಿದೆ. ವರದಿಗಾರ ಕಂಕಾರಿ ವಿರುದ್ಧ ಗೃಹ ಇಲಾಖೆ ಸ್ವಯಂಪ್ರೇರಿತರಾಗಿ ಕಾನೂನು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು.
ಕೆ.ಅಶ್ರಫ್.
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.







