janadhvani

Kannada Online News Paper

ಶಬರಿಮಲೆ ಪ್ರವೇಶಿಸಿದ್ದ ಮಹಿಳೆ ಮೇಲೆ ಹಲ್ಲೆ: ಹಿಂದುತ್ವ ಸಂಘಟನೆಗಳ ಕೃತ್ಯ- ಬಿಂದು ಅಮ್ಮಣ್ಣಿ

ಬಿಂದು ಮೇಲೆ ವ್ಯಕ್ತಿಯೊಬ್ಬ ದಾಳಿ ನಡೆಸುವ ಹಾಗೂ ದಾಳಿಯಿಂದ ಬಿಂದು ಸ್ವಯಂ ರಕ್ಷಣೆ ಮಾಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೋದಲ್ಲಿ ಸೆರೆಯಾಗಿದೆ.

ತಿರುವನಂತಪುರಂ: ಕೇರಳದ ಇತಿಹಾಸ ಪ್ರಸಿದ್ಧ ಶಬರಿಮಲೆ ದೇಗುಲಕ್ಕೆ ಪ್ರವೇಶ ಮಾಡಿದ್ದ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದಿದ್ದ ದಲಿತ ನಾಯಕಿ ಬಿಂದು ಅಮ್ಮಣ್ಣಿ ಮೇಲೆ ಬುಧವಾರ ದಾಳಿ ನಡೆದಿದೆ.

ಕಲ್ಲಿಕೋಟೆ ಬೀಚ್‌ನಲ್ಲಿ ಬಿಂದು ಅಮ್ಮಣ್ಣಿ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಿಂದು ಮೇಲಿನ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮಹಿಳೆಯರಿಗೂ ಶಬರಿಮಲೆ ದೇಗುಲಕ್ಕೆ ಪ್ರವೇಶ ಕಲ್ಪಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪಿತ್ತ ಬಳಿಕ, 2019ರಲ್ಲಿ ಬಿಂದು ಅಮ್ಮಣ್ಣಿ ಅಯ್ಯಪ್ಪ ಮಾಲೆ ಧರಿಸಿ ದೇಗುವಲವನ್ನು ಪ್ರವೇಶ ಮಾಡಿದ್ದರು. ಈ ಘಟನೆ ಇಡೀ ರಾದ್ಧಾಂತಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಬಿಂದು ಮೇಲೆ ಹಲ್ಲೆ ಕೂಡ ನಡೆದಿತ್ತು. ಇದೀಗ ಕಲ್ಲಿಕೋಟೆಯ ಸಮುದ್ರ ತೀರದಲ್ಲಿ ಬಿಂದು ಮೇಲೆ ಮತ್ತೆ ದಾಳಿ ನಡೆದಿದೆ.

ಬಿಂದು ಮೇಲೆ ವ್ಯಕ್ತಿಯೊಬ್ಬ ದಾಳಿ ನಡೆಸುವ ಹಾಗೂ ದಾಳಿಯಿಂದ ಬಿಂದು ಸ್ವಯಂ ರಕ್ಷಣೆ ಮಾಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನೊಬ್ಬ ವ್ಯಕ್ತಿ ಬಂದು ಹಲ್ಲೆ ಮಾಡುತ್ತಿದ್ದವನ್ನು ಹಿಡಿದು ಎಳೆಯುವ ದೃಶ್ಯಾವಳಿಗಳೂ ಕೂಡ ವಿಡಿಯೋದಲ್ಲಿ ದಾಖಲಾಗಿದೆ.

ಘಟನೆ ಬಗ್ಗೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ 323 (ಗಾಯ ಉಂಟು ಮಾಡಿದ್ದಕ್ಕೆ ಶಿಕ್ಷೆ) ಹಾಗೂ ಐಪಿಸಿ 509 (ಮಹಿಳೆಯರಿಗೆ ಅವಮಾನ ಮಾಡಿದ್ದಕ್ಕೆ ಶಿಕ್ಷೆ) ಸೆಕ್ಷನ್‌ಗಳಡಿ ಮೊಕದ್ದಮೆ ದಾಖಲಾಗಿದೆ.

ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಂದು ಅಮ್ಮಣ್ಣಿ, ‘ನನ್ನ ಮೇಲೆ ಈ ಥರ ಹಲ್ಲೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ನನ್ನ ಮೇಲೆ ದಾಳಿಗಳು ನಡೆದಿವೆ. ಹಿಂದುತ್ವ ಸಂಘಟನೆಗಳು ನನ್ನನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿವೆ’ ಎಂದು ಹೇಳಿದ್ದಾರೆ.

‘ನಾನು ನನ್ನ ವಕೀಲರೊಂದಿಗೆ ಮಾತುಕತೆ ನಡೆಸಲು ಬೀಚ್‌ಗೆ ಬಂದಿದ್ದೆ. ಈ ವೇಳೆ ಆಗಂತುಕನೊಬ್ಬ ಏಕಾಏಕಿ ನನ್ನ ಸ್ಕೂಟರ್‌ ಅಡ್ಡಗಟ್ಟಿದ. ಬೈಗುಳ ಶುರುಮಾಡಿದ ಆತ ನನ್ನ ಮೇಲೆ ನಿರಂತರ ಹಲ್ಲೆ ಮಾಡಿದ. ಸಾರ್ವಜನಿಕರು ಮಧ್ಯ ಪ್ರವೇಶ ಮಾಡಿದ ಬಳಿಕ ಆತ ಓಡಿ ಹೋದ’ ಎಂದು ಬಿಂದು ಘಟನೆಯನ್ನು ವಿವರಿಸಿದ್ದಾರೆ.

ಕಳೆದ ತಿಂಗಳು ಕೂಡ ಅವರ ಮೇಲೆ ದಾಳಿ ನಡೆದಿತ್ತು. ವೇಗವಾಗಿ ಬಂದ ಆಟೋ ರಿಕ್ಷಾವೊಂದು ಅವರ ಮೇಲೆ ಎರಗಿತ್ತು. ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದರು. ಇದು ನನ್ನ ಮೇಲೆ ನಡೆದ ಕೊಲೆ ಯತ್ನ ಎಂದು ಬಿಂದು ಅಮ್ಮಣ್ಣಿ ದೂರಿದ್ದರು.

ಮಹಿಳೆಯರೂ ಕೂಡ ಶಬರಿಮಲೆ ದೇಗುಲಕ್ಕೆ ಪ್ರವೇಶ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದಾದ ಬಳಿಕ 2019ರ ಜನವರಿ 2 ರಂದು ಬಿಂದು ಅಮ್ಮಣ್ಣಿ ಶಬರಿಮಲೆ ದೇಗುಲ ಪ್ರವೇಶ ಮಾಡಿದ್ದರು. ತಕ್ಷಣವೇ ಅಲ್ಲಿ ಗಲಭೆ ಉಂಟಾಗಿತ್ತು. ಬಳಿಕ ದೇಗುಲವನ್ನು ಶುದ್ಧೀಕರಣ ನಡೆಸುವ ಪ್ರಕ್ರಿಯೆಯೂ ನಡೆದಿತ್ತು.

ಈ ಹಿಂದೆ ನಡೆದ ಪೆಪ್ಪರ್ ಸ್ಪ್ರೇ ದಾಳಿ