janadhvani

Kannada Online News Paper

ಭಾರತ- ಸೌದಿ ವಿಮಾನಯಾನ- ಏರ್ ಇಂಡಿಯಾದ ಘೋಷಣೆ ಮತ್ತು ವಲಸಿಗರ ನಿರೀಕ್ಷೆ

ಇದು ಕಳೆದ ಜುಲೈನಿಂದ ಚಾಲನೆಯಲ್ಲಿರುವ ವಂದೇ ಭಾರತ್ ಸೇವೆ ಮಾತ್ರ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.

ಜಿದ್ದಾ: ಭಾರತ ಮತ್ತು ಸೌದಿ ವಿದೇಶಾಂಗ ಮಂತ್ರಿಗಳ ನಡುವಿನ ಮಾತುಕತೆಯ ನಂತರ ಯಾವುದೇ ಸಮಯದಲ್ಲಿ ಸೌದಿ ವಲಸಿಗರು ಭಾರತ ಮತ್ತು ಸೌದಿ ನಡುವಿನ ನೇರ ಸೇವೆಯನ್ನು ನಿರೀಕ್ಷಿಸುತ್ತಿದ್ದಾರೆ. ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಔಸಾಫ್ ಸಯೀದ್ ರು ಇದನ್ನು ಪುನರಾವರ್ತಿಸುತ್ತಲೇ ಇದ್ದಾರೆ.

ಈ ತಿಂಗಳ 31 ರಿಂದ ಮುಂದಿನ ಮಾರ್ಚ್ 26 ರವರೆಗೆ ಸೌದಿಯ ಜಿದ್ದಾ, ರಿಯಾದ್ ಮತ್ತು ದಮ್ಮಾಮ್‌ ನಗರಗಳಿಗೆ ವಿಮಾನಯಾನ ಸೇವೆಗಳನ್ನು ನಿರ್ವಹಿಸುವುದಾಗಿ ಏರ್ ಇಂಡಿಯಾ ಘೋಷಿಸಿದೆ ಮತ್ತು ಟಿಕೆಟ್‌ಗಳನ್ನು ಕಾಯ್ದಿರಿಸಬಹುದು ಎಂದು ಹೇಳಿದೆ.

ಏರ್ ಇಂಡಿಯಾ ಘೋಷಿಸಿದ ವಿಮಾನಗಳು ಪ್ರಸ್ತುತ ಚಾಲ್ತಿಯಲ್ಲಿರುವ ಸೇವೆಗಳಾಗಿವೆ ಹೊರತು, ಸೌದಿ ಅರೇಬಿಯಾದಿಂದ ಭಾರತಕ್ಕೆ ಮತ್ತು ಭಾರತದಿಂದ ಸೌದಿಗೆ ವಲಸಿಗರ ಬಹುನಿರೀಕ್ಷಿತ ನೇರ ಸೇವೆಗೆ ಯಾವುದೇ ಸಂಬಂಧವಿಲ್ಲ.
ಸೌದಿ ವಲಸಿಗರು ಈ ಘೋಷಣೆಯನ್ನು ಬಹಳ ನಿರೀಕ್ಷೆಯಿಂದ ನೋಡಿದರು.ಭಾರತ ಮತ್ತು ಸೌದಿ ಅರೇಬಿಯಾ ನಡುವೆ ನೇರ ಸೇವೆ ಆರಂಭಿಸಲಾಗುವುದು ಎಂಬ ವದಂತಿ ಹಬ್ಬಿತ್ತು.

ಆದರೆ, ಇದು ಕಳೆದ ಜುಲೈನಿಂದ ಚಾಲನೆಯಲ್ಲಿರುವ ವಂದೇ ಭಾರತ್ ಸೇವೆ ಮಾತ್ರ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ. ಈ ಹಿಂದೆ ಪ್ರತಿ ತಿಂಗಳು ಘೋಷಣೆ ಮಾಡಲಾಗುತ್ತಿತ್ತು ಆದರೆ ಈಗ ಮಾರ್ಚ್ 26 ರವರೆಗೆ ಇರಲಿದೆ ಎಂದು ಒಂದೇ ಸಮಯ ಘೋಷಣೆ ಮಾಡಲಾಗಿದೆ.
ಪ್ರಸ್ತುತ ಜಿದ್ದಾದಿಂದ ಮುಂಬೈಗೆ ಹೈದರಾಬಾದ್ ಮೂಲಕ ವಾರಕ್ಕೆ ಒಂದು ವಿಮಾನ ಮಾತ್ರ ಇದೆ. ಮರಳಿ, ಭಾನುವಾರ ಒಂದು ಸೇವೆ ಇದೆ. ಮಾರ್ಚ್ ವರೆಗೆ ಹೆಚ್ಚುವರಿ ವಿಮಾನವನ್ನು ಹೊಂದಿಸಲಾಗಿಲ್ಲ. ಜಿದ್ದಾದಿಂದ ಕೇರಳಕ್ಕೆ ಪ್ರಸ್ತುತ ಏರ್ ಇಂಡಿಯಾ ವಿಮಾನವಿಲ್ಲ. ರಿಯಾದ್ ಮತ್ತು ದಮಾಮ್‌ನಿಂದ ಕೇರಳಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್ ಇಂಡಿಯಾ ವಿಮಾನಗಳನ್ನು ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ ಎಂಬುದು ಮಾತ್ರ ಹೊಸ ಬದಲಾವಣೆಯಾಗಿದೆ.
ಮಾರ್ಚ್ 26 ರವರೆಗೆ ಜಿದ್ದಾ, ರಿಯಾದ್ ಮತ್ತು ದಮ್ಮಾಮ್‌ಗೆ ವಿಮಾನಗಳ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಏರ್ ಇಂಡಿಯಾ ಟ್ವೀಟ್ ಮಾಡಿದೆ. ಭಾರತದ ಯಾವ ಕೇಂದ್ರಗಳಿಂದ ಸೇವೆ ಲಭ್ಯವಿರುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ವೆಬ್‌ಸೈಟ್ ಮತ್ತು ಏಜೆಂಟ್‌ಗಳ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಏರ್ ಇಂಡಿಯಾದ ಹೊಸ ಕ್ರಮದ ವಿಶೇಷವೆಂದರೆ ಮಾರ್ಚ್ 26 ರವರೆಗೆ ಟಿಕೆಟ್ ಕಾಯ್ದಿರಿಸಬಹುದಾಗಿದೆ. ವಂದೇ ಭಾರತ್ ವಿಮಾನಗಳಲ್ಲಿ, ಸೌದಿ ಅರೇಬಿಯಾದಲ್ಲಿ ಎರಡು ಲಸಿಕೆಗಳನ್ನು ತೆಗೆದುಕೊಂಡವರು ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದಂತೆ ನೇರ ಪ್ರಯಾಣಕ್ಕಾಗಿ ರಿಯಾಯಿತಿಗಳನ್ನು ಪಡೆದವರು ಸೌದಿಗೆ ಹಿಂತಿರುಗಬಹುದು.