janadhvani

Kannada Online News Paper

ಎಸ್ ವೈ ಎಸ್, ಎಸ್ಸೆಸ್ಸೆಫ್ ಅಕ್ಷರ ನಗರ ಕಾರ್ಯಕರ್ತರಿಂದ ಶ್ರಮದಾನ

ಎಸ್ ವೈ ಎಸ್ ಮತ್ತು ಎಸ್ಸೆಸ್ಸೆಫ್ ಅಕ್ಷರ ನಗರ ಶಾಖಾ ವತಿಯಿಂದ ಮಲಾರ್ ಸೈಟ್ ನಿಂದ ಅಲ್ ಮುಬಾರಕ್ ಜುಮಾ ಮಸೀದಿ ಕಡೆಗೆ ಇರುವ ಕಾಲು ದಾರಿಯನ್ನು ಸ್ವಚ್ಚಗೊಳಿಸಿ ಶ್ರಮದಾನ ನಡೆಸಲಾಯಿತು.

ಎಸ್ ವೈ ಎಸ್ ನಾಯಕರಾದ ಸಲಾಂ ಮುಸ್ಲಿಯಾರ್, ಆಸಿಫ್ ಎಸ್ಸೆಸ್ಸೆಫ್ ಅಧ್ಯಕ್ಷ ಫರಾಝ್, ಪ್ರಧಾನ ಕಾರ್ಯದರ್ಶಿ ರಾಝಿಕ್, ಕೋಶಾಧಿಕಾರಿ ಸಮದ್, ಇಕ್ಬಾಲ್,ಮುಬಾರಕ್, ಇರ್ಫಾನ್, ಮನ್ಸೂರ್, ಫಯಾಝ್, ಹಸೈನಾರ್, ಉಳ್ಳಾಲ ಕಾಕ, ರಹಿಮಾನ್ ರವರು ಪಾಲ್ಗೊಂಡಿದ್ದರು.

ಸಿಹಿ ಪಾನೀಯವನ್ನು ಇಬ್ರಾಹಿಂ ರವರ ಮನೆಯವರು ನೀಡಿ ಸಹಕರಿಸಿದರು.ಸಹಕರಿಸಿದ ಸಹಾಯ ಮಾಡಿದ ಸರ್ವರ ಸತ್ಕರ್ಮಗಳನ್ನೂ ಅಲ್ಲಾಹನು ಸ್ವೀಕರಿಸಲಿ ಆಮೀನ್.