janadhvani

Kannada Online News Paper

ದುಲ್ ಫುಖಾರ್ ಕನ್ಯಾನ: 21 ನೇ ವಾರ್ಷಿಕೋತ್ಸವದ ಯಶಸ್ವಿಗೆ ಕರೆ

ವಿಟ್ಲ :ಕಳೆದೆರಡು ದಶಕಗಳಿಂದ ಬಡ ಮತ್ತು ಅನಾಥರ ಸೇವೆಯಲ್ಲಿ ತೊಡಗಿರುವ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕನ್ಯಾನದಲ್ಲಿರುವ ದುಲ್ ಫುಖಾರ್ ಸೇವಾ ಸಂಘ(ರಿ) ಚೆಡವು ಕನ್ಯಾನ ಇದರ 21ನೇ ವಾರ್ಷಿಕೋತ್ಸವವು 2021 ಏಪ್ರಿಲ್ 7 ಬುಧವಾರದಂದು ಕನ್ಯಾನ ರಹ್ಮಾನಿಯಾ ಜುಮಾ ಮಸ್ಜಿದ್ ವಟಾರದಲ್ಲಿ ನಡೆಯಲಿದೆ

ಸ್ಥಳೀಯ ಖತೀಬ್ ಇಬ್ರಾಹಿಂ ಫೈಝಿ ಉಸ್ತಾದರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಜೆ 4 ಗಂಟೆಗೆ ನಡೆಯುವ ಬದ್ರ್ ಮೌಲಿದ್ ಹಾಗೂ ತಾಜುಶ್ಶರೀಅ ಆಲಿಕುಂಞ ಉಸ್ತಾದ್ ಅನುಸ್ಮರಣೆಗೆ ಕುಂಬೋಲ್ ಜಾಅಫರ್ ಸ್ವಾದಿಕ್ ತಂಗಲ್ ನೇತೃತ್ವ ನೀಡಲಿದ್ದಾರೆ.

ಲಕ್ಷಾಂತರ ವಿಶ್ವಾಸಿಗಳು ವೀಕ್ಷಿಸುವ ಮದನೀಯಂ ಕಾರ್ಯಕ್ರಮದ ರೂವಾರಿ ಲತೀಫ್ ಸಖಾಫಿ ಕಾಂತಪುರಂ ಮುಖ್ಯ ಪ್ರಭಾಷಣಗೈಯಲಿದ್ದಾರೆ
ಇನ್ನಿತ್ತರ ಉಲಮಾ ಉಮರಾಗಳು ಭಾಗವಹಿಸಲಿದ್ದಾರೆಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.