ಭಟ್ಕಳ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ರಾಜ್ಯ ಕೌನ್ಸಿಲರ್ಸ್ ರಿಗೆ ಎರಡು ದಿನ ನಡೆದ ಅಸಂಬ್ಲೇಜ್ ಕಾರ್ಯಾಗಾರ ತಾಜುಸ್ಸುನ್ನ ಭಟ್ಕಳದಲ್ಲಿ ಯಶಸ್ವಿ ಸಮಾಪ್ತಿಯಾಯಿತು.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಅಧ್ಯಕ್ಷತೆ ವಹಿಸಿದ್ದರು.
ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಮಜೀದ್ ಮಾಸ್ಟರ್ ಅರಿಯಲ್ಲೂರು,ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ನೌಫಲ್ ಸಖಾಫಿ ಕಳಸ ತರಗತಿಯನ್ನು ನಡೆಸಿದರು.ರಾಶಿದ್ ಬುಖಾರಿ ಕೊಲ್ಲಂ ಸಮಾರೋಪ ಭಾಷಣಗೈದರು.
ದ್ವಿದಿನ ನಡೆದ ಅಸಂಬ್ಲೇಜ್ ಕಾರ್ಯಾಗಾರದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯ ಕಾರ್ಯಾಚರಣೆಯ ಯೋಜನೆಗಳ ಸಮಗ್ರ ಚರ್ಚೆ ನಡೆಯಿತು.

ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಳ್ ಸುಫ್ಯಾನ್ ಸಖಾಫಿ,ರಾಜ್ಯ ನಾಯಕರಾದ ಸಯ್ಯದ್ ಅಲವೀ ತಂಙಳ್ ಕರ್ಕಿ,ರಾಜ್ಯ ಕಾರ್ಯದರ್ಶಿಗಳಾದ ಮುಸ್ತಫಾ ನಈಮಿ ಹಾವೇರಿ,ಹುಸೈನ್ ಸಅದಿ ಹೊಸ್ಮಾರ್,ಸಫ್ವಾನ್ ಚಿಕ್ಕಮಂಗಳೂರು,ಶರೀಫ್ ಕೊಡಗು,ವಾಜಿದ್ ಹಾಸನ,ನವಾಝ್ ಭಟ್ಕಳ,ಎನ್.ಸಿ ರಹೀಂ ಉಡುಪಿ,ಹಕೀಂ ಬೆಂಗಳೂರು,ಮುಬಶ್ಶಿರ್ ಅಹ್ಸನಿ ಕೊಡಗು ಮೊದಲಾದವರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿ,ಕೊನೆಗೆ ವಂದಿಸಿದರು.







