janadhvani

Kannada Online News Paper

SSF ವಿದ್ಯಾನಗರ ಧ್ವಜ ದಿನಾಚರಣೆ

S S F ವಿದ್ಯಾನಗರ ಶಾಖೆ ವತಿಯಿಂದ ಧ್ವಜ ದಿನ ಕಾರ್ಯಕ್ರಮ ಇಂದು ಬೆಳಿಗ್ಗೆ 8 ಗಂಟೆಗೆ ಜುಮಾ‌ಮಸೀದಿ ವಠಾರದಲ್ಲಿ ನಡೆಯಿತು.

ಶಾಖಾ ಎಸ್ಸೆಸ್ಸೆಫ್ ಅಧ್ಯಕ್ಷರು ಶರೀಫ಼್ ಹಾಗೂ ಜಮಾಅತಿನ ಖತೀಬ್ ಉಸ್ತಾದ್ ಧ್ವಜಾರೋಹಣಗೈದು ದುವಾ ನೆರೆವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಸ್ಮಾಯಿಲ್ ಉಸ್ತಾದ್ ರವರು ವಹಿಸಿದ್ದರು‌.

ಎಸ್ಸೆಸ್ಸೆಫಿನ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಶಾಫಿ ಬಿ ಸ್ವಾಗತಿಸಿ, ಅಶ್ರಫ್ ವಿದ್ಯಾ ನಗರ ವಂದಿಸಿದರು.