janadhvani

Kannada Online News Paper

ಕೆ.ಸಿ.ಎಫ್ ಸೀಬ್ ಝೋನ್ ವಾರ್ಷಿಕ ಮಹಾಸಭೆ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಇದರ ಸೀಬ್ ಝೋನ್ ನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಝೂಮ್ ಆಪ್ ಮೂಲಕ ಅಧ್ಯಕ್ಷರಾದ ಜಸೀಮ್ ಅಹ್ಮದ್ ಕೊಪ್ಪರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಇರ್ಷಾದ್ ಬರ್ಕಾರವರು ದುಆಃ ಮೂಲಕ ಸಭೆಗೆ ಚಾಲನೆ ನೀಡಿದರು. ಝೋನ್ ಕಾರ್ಯದರ್ಶಿ ಹನೀಫ್ ಕೆ.ಸಿ ರೋಡ್ ಸ್ವಾಗತಿಸಿದರು. ಬರ್ಕಾ ಸೆಕ್ಟರ್ ಅಧ್ಯಕ್ಷರಾದ ಶರೀಫುಲ್ಲಾ ನಾವುಂದ ಸಭೆಯನ್ನು ಉದ್ಘಾಟಿಸಿದರು. ವೀಕ್ಷಕರಾಗಿ ಹನೀಫ್ ಸಅದಿ ಕುಡ್ತಮುಗೇರು ಹಾಜರಿದ್ದರು.

ಕಾರ್ಯದರ್ಶಿ ಹನೀಫ್ ಕೆ.ಸಿ ರೋಡ್ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಬಳಿಕ ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಲಹೆಗಾರರಾಗಿ ಉಮರ್ ಸಖಾಫಿ ಮಿತ್ತೂರು, ಆಬಿದ್ ತಂಙಳ್ ಎಮ್ಮೆಮ್ಮಾಡು, ಇಕ್ಬಾಲ್ ಬರ್ಕ, ಸ್ವಾದಿಕ್ ಹಾಜಿ ಸುಳ್ಯ ರವರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಜಸೀಮ್ ಅಹ್ಮದ್ ಕೊಪ್ಪ, ಕಾರ್ಯದರ್ಶಿಯಾಗಿ ಹನೀಫ್ ಕೆ.ಸಿ ರೋಡ್, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಬಾಳೆಹೊನ್ನೂರು ಆಯ್ಕೆಗೊಂಡರು. ವಿವಿಧ ಸಮಿತಿಗಳಾದ ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಶರೀಫುಲ್ಲಾ ನಾವುಂದ, ಕಾರ್ಯದರ್ಶಿಯಾಗಿ ರಝಾಕ್ ಪೂಂಜಾಲಕಟ್ಟೆ, ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಹೆಚ್.ಕಲ್, ಕಾರ್ಯದರ್ಶಿಯಾಗಿ ಮುನೀರ್ ಮಧ್ಯನಡ್ಕ, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಸಫ್ವಾನ್ ಕರೋಪಾಡಿ, ಕಾರ್ಯದರ್ಶಿಯಾಗಿ ಕರೀಂ ಸುರಿಬೈಲು, ಮೀಡಿಯ ಮತ್ತು ಪಬ್ಲಿಕೇಷನ್ ವಿಭಾಗದ ಅಧ್ಯಕ್ಷರಾಗಿ ಫಾರೂಕ್, ಕಾರ್ಯದರ್ಶಿಯಾಗಿ ಮುಝಮ್ಮಿಲ್ ಅಳಕೆಮಜಲು, ಇಹ್ಸಾನ್ ವಿಭಾಗದ ಅಧ್ಯಕ್ಷರಾಗಿ ಶಬ್ಬೀರ್ ಇಂಜಿನಿಯರ್, ಕಾರ್ಯದರ್ಶಿಯಾಗಿ ಇರ್ಫಾನ್ ಬೆಂಗಳೂರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಝೀಝ್ ಬಾಳೆಪುಣಿ, ಇರ್ಷಾದ್ ಮಾರಿಪಳ್ಳ, ಫೈಝಲ್ ಸುರತ್ಕಲ್, ಆಬಿದ್ ತೀರ್ಥಹಳ್ಳಿ, ಅರ್ಫಾಝ್ ಮೂಡಬಿದ್ರೆ ಆಯ್ಕೆ ಗೊಂಡರು.

ವೀಕ್ಷರಾಗಿ ಉಪಸ್ಥಿತರಿದ್ದ ಹನೀಫ್ ಸಅದಿ ಮತ್ತು
ಸೀಬ್ ಝೋನ್ ನ ಉಸ್ತುವಾರಿಯಾದ ಫಾರೂಕ್ ಕುಕ್ಕಾಜೆ ಸಲಹೆ ಸೂಚನೆಗಳನ್ನು ನೀಡಿದರು.ಕಾರ್ಯದರ್ಶಿ ಹನೀಫ್ ವಂದಿಸಿದರು.