janadhvani

Kannada Online News Paper

ಭಯೋತ್ಪಾದಕ ದುಬೆ ಪೊಲೀಸ್ ಎನ್ ಕೌಂಟರ್ ಗೆ ಬಲಿ

ಕಾನ್ಪುರ: ಕುಖ್ಯಾತ ನಟೋರಿಯಸ್ ಕ್ರಿಮಿನಲ್ ಭಯೋತ್ಪಾದಕ ವಿಕಾಸ್ ದುಬೆ ಇಂದು ಬೆಳಗ್ಗೆ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಆತನನ್ನು ಯು ಪಿ ಪೊಲೀಸರು ಮಧ್ಯಪ್ರದೇಶದಿಂದ ಬಂಧಿಸಿ ಯು ಪಿ ಗೆ ಕರೆತರುತ್ತಿದ್ದರು.

ಬಾರೀ ಮಳೆಯ ಕಾರಣ ದುಬೆಯನ್ನು ಕರೆತರುತ್ತಿದ್ದ ಪೊಲೀಸ್ ವಾಹನ ಸ್ಕಿಡ್ ಆಗಿ ಮಗುಚಿ ಬಿತ್ತು ಮತ್ತು ದುಬೆಯನ್ನು ವಾಹನದಿಂದ ಹೊರಗೆ ತೆಗೆಯುವ ಸಂದರ್ಭ ಪೊಲೀಸರ ಬಂದೂಕು ಕಿತ್ತು ಗುಂಡು ಹಿಡಿಯಲು ಯತ್ನಿಸಿದಾಗ ಆತನಿಗೆ ಗುಂಡು ಹಾಕಲಾಯಿತು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದ ಎಂದು ಪೊಲೀಸರು ಇನ್ಸ್ಪೆಕ್ಟರ್ ಜನರಲ್ ಮೋಹಿತ್ ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ.