janadhvani

Kannada Online News Paper

ಈದ್ ಮೀಲಾದ್ ನ,10 ಕ್ಕೆ- ಖಾಝಿ ಖುರ್ರತುಸ್ಸಾದಾತ್ ಮತ್ತು ಬೇಕಲ್ ಉಸ್ತಾದ್ ಘೋಷಣೆ

ಮಂಗಳೂರು.ಅ.29: ಇಂದು ಸಫರ್ ತಿಂಗಳು 30 ಪೂರ್ತಿಗೊಂಡು ನಾಳೆ 30-10-2019 ಬುಧವಾರ ರಬೀವುಲ್ ಅವ್ವಲ್ ಪ್ರಥಮ ದಿನವಾಗಿರುತ್ತದೆ. ನವಂಬರ್ 10 ಆದಿತ್ಯವಾರ ರಬೀವುಲ್ ಅವ್ವಲ್ 12 ಆಗಿದ್ದು, ಲೋಕಾನುಗ್ರಹಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ದಿನಾಚರಣೆ ಆಗಿರುತ್ತದೆ ಎಂದು ಗೌರವಾನ್ವಿತ ಉಳ್ಳಾಲ ಮತ್ತು ದ.ಕ.ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಙಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.

ಈದ್ ಮೀಲಾದ್ ನವೆಂಬರ್ 10 ಆದಿತ್ಯವಾರ : ಉಡುಪಿ ಖಾಝಿ ಬೇಕಲ ಉಸ್ತಾದ್

ಉಡುಪಿ: ಸಫರ್ ತಿಂಗಳ ಚಾಂದ್ 30 ಪೂರ್ತಿಯಾಗಿರುವುದರಿಂದ ರಬೀವುಲ್ ಅವ್ವಲ್ 1 ಅಕ್ಟೋಬರ್ 30 ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿಯಾಗಿದೆ.

ರಬೀವುಲ್ ಅವ್ವಲ್ ಹನ್ನೆರಡು ನವೆಂಬರ್ 10 ಆದಿತ್ಯವಾರ ಮೀಲಾದುನ್ನೆಬಿ (ಸ.ಅ) ಆಚರಿಸುವುದಾಗಿ ಉಡುಪಿ.ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಖಾಝಿ ತಾಜುಲ್ ಫುಖಹಾಅ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ತಿಳಿಸಿರುವುದಾಗಿ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಸಂಘಟನಾ ಕಾರ್ಯದರ್ಶಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.