ಕರ್ನಾಟಕ ಕಲ್ಚರಲ್ ಫೌಂಡೇಶನ್
ಕೆಸಿಎಫ್ ಒಮಾನ್ ಇದರ ವತಿಯಿಂದ ಇತ್ತೀಚೆಗೆ ಅಲ್ ಹುದಾ ಮದ್ರಸ ಗೋಬ್ರದಲ್ಲಿ 2019 ಮೀಲಾದ್ ಅಭಿಯಾನ ವನ್ನು ಉದ್ಘಾಟಿಸಿದಲಾಯಿತು.

ಕೆಸಿಎಫ್ ಅಂತರಾಷ್ಟ್ರೀಯ ನಿರ್ಣಯದಂತೆ ಮೀಲಾದ್ ಪ್ರಯುಕ್ತ
ಹಬೀಬ್ ﷺ ನಮ್ಮ ಜತೆಗಿರಲಿ
ಎಂಬ ಘೋಷ ವಾಕ್ಯದೋಂದಿಗೆ
ಮೀಲಾದ್ ಅಭಿಯಾನವು
ಅಕ್ಟೋಬರ್ 4 ರಿಂದ ಡಿಸೆಂಬರ್ 4 ರ ತನಕ ಒಮಾನಿನದ್ಯಾಂತ ನಡೆಯಲಿದೆ.
ಸಭೆಯಲ್ಲಿ ಸಯ್ಯಿದ್ ಸೈಫುದ್ದೀನ್ ತಂಙಳ್ ಸಖಾಫಿ ಎಮ್ಮೆಮ್ಮಾಡು ಇವರು ದುವಾಃ ನೆರವೇರಿಸಿದರು.
ಕೆಸಿಎಫ್ ಒಮಾನ್ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿ ಇವರ ಅಧ್ಯಕ್ಷತೆಯಲ್ಲಿ ನೆಡೆದ ಅಭಿಯಾನದ ಉದ್ಘಾಟನೆಯನ್ನು
ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಕಾರ್ಯದರ್ಶಿ ಉಮರ್ ಸಖಾಫಿ ಮಿತ್ತೂರು ಇವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಸುಳ್ಯ, ಕೋಶಾಧಿಕಾರಿ ಜನಾಬ್ ಆರಿಫ್ ಕೋಡಿ , ಶಿಕ್ಷಣ ವಿಭಾಗದ ಅಧ್ಯಕ್ಷ ಉಬೈದುಲ್ಲಾಹ್ ಸಖಾಫಿ, ಪಬ್ಲಿಷಿಂಗ್ ವಿಭಾಗದ ಅಧ್ಯಕ್ಷ ಶಮೀರ್ ಉಸ್ತಾದ್ ಹೂಡೆ,
ಮೀಲಾದ್ ಸ್ವಾಗತ ಸಮಿತಿ ವೈಸ್ ಚೇರ್ಮೆನ್ ಹಂಝ ಕನ್ನಂಗಾರ್,
ಪ್ರತಿಬೋತ್ಸವದ ಚೇರ್ಮೆನ್ ಹನೀಫ್ ಸಅದಿ, ಎಲ್ಲಾ ವಿಭಾಗದ ಕಾರ್ಯದರ್ಶಿಗಳು ಹಾಗೂ ರಾಷ್ಟ್ರೀಯ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ ಮೀಲಾದ್ ಸ್ವಾಗತ ಸಮಿತಿ ಕನ್ವೀನರ್ ಸಯ್ಯಿದ್ ಆಬಿದ್ ತಂಙಳ್ ಅಲ್ ಹೈದ್ರೋಸಿ ಸ್ವಾಗತಿಸಿ ವಂದಿಸಿದರು.






