janadhvani

Kannada Online News Paper

ಎಸ್ಸೆಸ್ಸೆಫ್ ಕೊಪ್ಪ ಡಿವಿಷನ್: “ULAZ” ಮತ್ತು “ಹಳೆ ಬೇರು ಹೊಸ ಚಿಗುರು”

ಎಸ್ ಎಸ್ ಎಫ್ ಕೊಪ್ಪ ಡಿವಿಷನ್ ಮಟ್ಟದಲ್ಲಿ ಡಿವಿಷನ್ ಅಧ್ಯಕ್ಷರಾದ ಸ್ವಾದಿಕ್ ರವರ ಘನ ಅಧ್ಯಕ್ಷತೆಯಲ್ಲಿ ULAZ ಮತ್ತು ಹಳೆ ಬೇರು ಹೊಸ ಚಿಗುರು ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ಎಸ್ ಎಸ್ ಎಫ್ ಚಿಕ್ಕಮಗಳೂರು ಜಿಲ್ಲಾ ಉಪಾಧ್ಯಕ್ಷರಾದ ಬಹು!ಝೈನುಲ್ ಆಬಿದ್ ಸಖಾಫಿಯವರು ತರಗತಿಯನ್ನು ನಡೆಸಿ ಪ್ರವಾದಿ(ಸ.ಅ)ಯವರ ಸುನ್ನತ್ ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ಕಾರ್ಯಕರ್ತನ ಆದ್ಯ ಕರ್ತವ್ಯವಾಗಿದೆ ಎಂಬುದನ್ನು ಸವಿಸ್ತಾರವಾಗಿ ತಿಳಿಸಿದರು.

ಜೊತೆಯಲ್ಲಿ ಹಳೆ ಬೇರು ಹೊಸ ಚಿಗುರು ಕಾರ್ಯಕ್ರಮವನ್ನು ಉದ್ದೇಶಿಸಿ ತರಗತಿಯನ್ನು ನಡೆಸಿ ಪೂರ್ವಿಜರು ನಮ್ಮ ಸಂಘಟನೆಗಾಗಿ ಬಂದಂತಹ ಕಷ್ಟಗಳನ್ನು ಕಾರ್ಯಕರ್ತರಿಗೆ ಮನದಟ್ಟಾಗುವಂತೆ ಅರಿವು ಮೂಡಿಸಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ ಎಸ್ ಎಫ್ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಹು!ಸರ್ಫುದ್ದೀನ್, ಜಿಲ್ಲಾ ನಾಯಕರಾದ ಅಬ್ದುಲ್ ರೆಹಮಾನ್, ಸುಲೈಮಾನ್, ಶಮೀಮ್, ಆರೀಫ್, ಹನೀಫ್ ರವರು ಉಪಸ್ಥಿತರಿದ್ದರು.
ಡಿವಿಷನ್ ಪ್ರಧಾನ ಕಾರ್ಯದರ್ಶಿ ಶರೀಫ್ ರವರು ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.