ಮೈಸೂರು : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಸಕ್ರೀಯ ಕಾರ್ಯಕರ್ತರ ತಂಡ Qteam ಇದರ ಮೈಸೂರು ಜಿಲ್ಲಾ ಮಟ್ಟದ ಝಾಕ್ವಿಕ್ ಕಾರ್ಯಕ್ರಮ ಮೈಸೂರು ಶಾಂತಿನಗರದ ಅಲ್ ನೂರ್ ನಲ್ಲಿ ನಡೆಯಿತು.
ಮೈಸೂರು, ಹುನಸೂರು, ಕೆ.ಆರ್ ನಗರದಿಂದ ಕ್ಯು ಟೀಂ ಸದಸ್ಯರು ಭಾಗವಹಿಸಿದ್ದರು. ಎಸ್ಸೆಸ್ಸೆಫ್ ಮೈಸೂರು ಜಿಲ್ಲಾ ಅಧ್ಯಕ್ಷ ಮೌಲಾನಾ ಫಾರೂಖ್ ಸುಬ್ಹಾನಿ ಅಧ್ಯಕ್ಷತೆ ವಹಿಸಿದ್ದರು.ಮೈಸೂರು ಅಲ್ ನೂರ್ ಸಾರಥಿ ಹಾಜಿ ಅಬ್ದುಲ್ ಖಾದರ್ ಕಾರ್ಯಕ್ರಮ ಉದ್ಘಾಟಿಸಿದರು.


ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಮಂಗಳೂರು ಸಂಘಟನೆ ನಾಡಿಗೆ ನೀಡಿದ ಕೊಡುಗೆ ಹಾಗೂ ಯುವಜನತೆಯಲ್ಲಿ ಉಂಟು ಮಾಡಿದ ಪರಿವರ್ತನೆಯ ಬಗ್ಗೆ ಮಾಹಿತಿ ನೀಡಿ ಕ್ಯು ಟೀಂ ಮೂಲಕ ರಾಜ್ಯದಾದ್ಯಂತ ಸಂಘಟನೆಯನ್ನು ಬಲಿಷ್ಠ ಗೊಳಿಸುವ ಬಗ್ಗೆ ವಿವರಿಸಿದರು. ಎಸ್ಸೆಸ್ಸೆಫ್ ರಾಜ್ಯ ನಾಯಕ ನವಾಝ್ ಭಟ್ಕಳ್, ಅಬೂಬಕ್ಕರ್ ಅಝ್ಹರಿ ಹುಣಸೂರು, ಅಮೀನ್ ಮಿಸ್ಬಾಹಿ ಕೆ.ಆರ್ ನಗರ, ಶಿಹಾಬ್ ಸಖಾಫಿ ಮೈಸೂರು, ಅಬ್ದುಲ್ ಅಝೀಝ್ ಮಿಸ್ಬಾಹಿ, ಸಫ್ವಾನ್ ನೂರಾನಿ, ಮುಂತಾದವರು ಭಾಗವಹಿಸಿದ್ದರು.
ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಮದನಿ ಸ್ವಾಗತಿಸಿ ವಂದಿಸಿದರು.






