janadhvani

Kannada Online News Paper

SYS ಕಟ್ಟತ್ತಿಲ ಸೆಂಟ್ರಲ್ ಬ್ರಾಂಚ್: ವಾರ್ಷಿಕ ಮಹಾಸಭೆ

ಕಟ್ಟತ್ತಿಲ :SYS ಕಟ್ಟತ್ತಿಲ ಸೆಂಟ್ರಲ್ ಬ್ರಾಂಚ್ ಇದರ ವಾರ್ಷಿಕ ಮಹಾಸಭೆ ದಿನಾಂಕ 26 ಸೆಪ್ಟಂಬರ್ ಇಶಾ ನಮಾಜಿನ ಬಳಿಕ ನಡೆಸಲಾಯಿತು.

SYS ರಾಜ್ಯ ನಾಯಕರಾದ ಬಹು:ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಕಾವೂರ್ ಅವರ ಸಮ್ಮುಖದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಅಲ್ ಹಾಜ್ ಅಬೂಬಕ್ಕರ್ ಸಿದ್ದೀಕ್ ಮುಸ್ಲಿಯಾರ್ ಅವರನ್ನು ಆಯ್ಕೆ ಮಾಡಲಾಯಿತು ಹಾಗೂ ಪ್ರಧಾನ ಕಾರ್ಯದರ್ಶಿ, ಕೋಶಧಿಕಾರಿ, ಉಪಾಧ್ಯಕ್ಷರು ಹಾಗೂ ಶಿಕ್ಷಣ,ವೆಲ್ಫೇರ್ ,ಟೀಮ್ ಇಸಾಬ ಕಾರ್ಯದರ್ಶಿಗಳು ಮತ್ತು ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

ವೇದಿಕೆಯಲ್ಲಿ ಆಬಿದ್ ನಈಮಿ, ಕೆ.ಪಿ ಅಬ್ದುಲ್ ಖಾದರ್ , ಅಬ್ದುಲ್ ಹಮೀದ್ ಹಾಜಿ , ಅಶ್ರಫ್ ಸೆರ್ಕಳ ಉಪಸ್ಥಿತರಿದ್ದರು.
ವರದಿ: ಶಫೀಖ್ ಕಟ್ಟತ್ತಿಲ (ಪ್ರ.ಕಾರ್ಯದರ್ಶಿ SSF ಕಟ್ಟತ್ತಿಲ ಸೆಂಟ್ರಲ್ ಯುನಿಟ್)

error: Content is protected !! Not allowed copy content from janadhvani.com