ಪಡುಬಿದ್ರಿ : ಎಸ್ಸೆಸ್ಸೆಫ್ ಪಡುಬಿದ್ರಿ ಶಾಖ ವತಿಯಿಂದ ಧ್ವಜ ದಿನ ಪಡುಬಿದ್ರಿ ಹಾಗೂ ಕಾರ್ಕಳ ರಾಜ್ಯ ಹೆದ್ದಾರಿ ಯ ಕಂಚಿನಡ್ಕ ಜುಮುಅ ಮಸೀದಿ ರಸ್ತೆ ಯ ದ್ವಾರ ದ ಬಳಿ ಜರುಗಿತು, ದುಅ ಹಾಗೂ ನೇತೃತ್ವ ವನ್ನು ಪಡುಬಿದ್ರಿ ಕೇಂದ್ರ ಮಸೀದಿಯ ಖತೀಬರಾದ ಅಲ್ ಹಾಜ್ SM ಅಬ್ದುರ್ರಹ್ಮಾನ್ ಮದನಿ ಉಸ್ತಾದ್ ನೆರವೇರಿಸಿದರು.
ಧ್ವಜಾರೋಹಣ ಕಾರ್ಯಕ್ರಮವನ್ನು ಮುಹಿಯುಧ್ಧೀನ್ ಜುಮುಅ ಮಸೀದಿ ಇದರ ಸದಸ್ಯರಾದ ನಝೀರ್ ಕಂಚಿನಡ್ಕ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮತ್ತು SYS ಉಪಾಧ್ಯಕ್ಷ ರಾದ ಹಸನ್ ಬಾವ ಕಂಚಿನಡ್ಕಇವರು ಶುಭಹಾರೈಸಿದರು.
ಈ ಕಾರ್ಯಕ್ರಮದ ಬಗ್ಗೆ ಹಿತನುಡಿ ಯನ್ನು ಎಸ್ಎಸ್ಎಫ್ ಪಡುಬಿದ್ರಿ ಶಾಖೆ ಮಾಜಿ ಅಧ್ಯಕ್ಷರಾದ ನಿಯಾಝ್ ದೀನ್ ಸ್ಟ್ರೀಟ್ & ತೌಶೀಫ್ ಬೇಂಗ್ರೆ ಮತ್ತು ಎಸ್ಎಸ್ಎಫ್ ಪಡುಬಿದ್ರಿ ಶಾಖೆ ಅಧ್ಯಕ್ಷ ರಾದ ಪಿ.ಎಂ ತೌಸೀರ್ ನಿರ್ವಹಿಸಿದರು.
ಈ ಕಾರ್ಯಕ್ರಮಕ್ಕೆ ಬಂದ ಎಲ್ಲಾ ಅತಿಥಿ ಮತ್ತು SSFಎಲ್ಲ ಸದಸ್ಯರಿಗೂ ಕಾರ್ಯದರ್ಶಿ ಸಫ್ವಾನ್ ಧನ್ಯವಾದ ವನ್ನು ಸಮರ್ಪಿಸಿದರು.
ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ವರದಿ : ಪಿ ಎಂ ಸ್ ಪಡುಬಿದ್ರಿ






