janadhvani

Kannada Online News Paper

ಕೊಡಂಗಾಯಿ ಟಿಪ್ಪು ನಗರ ದಾರುನ್ನಜಾತ್ ಕ್ಯಾಂಪಸ್ಸಿನಲ್ಲಿ ನಾಳೆ ಪ್ರಾರ್ಥನಾ ಮಜ್ಲಿಸ್

ವಿಟ್ಲ: ಇತ್ತೀಚೆಗೆ ನಮ್ಮನ್ನಗಲಿದ ಕರುನಾಡ ಕಣ್ಮಣಿ ಮರ್ಹೂಂ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ (ನ.ಮ) ಹೆಸರಿನಲ್ಲಿ 06-08-2019 ಮಂಗಳವಾರ ರಾತ್ರಿ 7-30ಕ್ಕೆ ದಾರುನ್ನಜಾತ್ ಸಭಾಂಗಣದಲ್ಲಿ ಪ್ರಾರ್ಥನಾ ಮಜ್ಲಿಸ್ ನಡೆಯಲಿದೆ.

ದಾರುನ್ನಜಾತ್ ಸಂಸ್ಥೆಯ ಅಧ್ಯಕ್ಷರಾದ ಶ್ಯೆಖುನಾ ಪಿ ಕೆ ಅಬೂಬಕ್ಕರ್ ಉಸ್ತಾದ್, ದಾರುಲ್ ಅಶ್ಅರಿಯ್ಯಾ ಸುರಿಬ್ಯೆಲ್ ಅಧ್ಯಕ್ಷರಾದ ಶೈಖುನಾ ಕೆ.ಎ ಮಹ್ಮೂದುಲ್ ಫೈಝಿ ವಾಲೆಮೊಂಡವು ಉಸ್ತಾದ್, ದಾರುನ್ನಜಾತ್ ಮುದರ್ರಿಸರಾದ ಮುಹಮ್ಮದ್ ಫಾಲಿಳಿ ಅಲ್ ಕಾಮಿಲ್ ಸಖಾಫಿ, ದಾರುನ್ನಜಾತ್ ಮಹಿಳಾ ಶರೀಅತ್ ಕಾಲೇಜಿನ ಪ್ರಿನ್ಸಿಪಾಲ್ ಅಬ್ದುಲ್ ಖಾದರ್ ಫೈಝಿ, ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ SMA ರಾಜ್ಯ ಸಮಿತಿ ಉಪಾಧ್ಯಕ್ಷರಾದ ಹಾಜಿ ಹಮೀದ್ ಕೊಡಂಗಾಯಿ ಸಹಿತ ಹಲವಾರು ಉಲಮಾ ಉಮರಾಗಳ ನೇತೃತ್ವದಲ್ಲಿ ಪ್ರಾರ್ಥನಾ ಮಜ್ಲಿಸ್ ಜರುಗಲಿದೆ.

ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪತ್ರಿಕಾ ಪ್ರಕಟನೆಯಲ್ಲಿ ಕೋರಲಾಗಿದೆ.

ವರದಿ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ