janadhvani

Kannada Online News Paper

ಶರಫುಲ್ ಉಲಮಾ ವಫಾತ್-ಎಸ್ ಜೆ ಎಂ ಸಂತಾಪ

ಮಂಗಳೂರು: ಹಿರಿಯ ವಿದ್ವಾಂಸ ಅಲ್ ಮದೀನ ಸಂಸ್ಥೆಯ ಶಿಲ್ಪಿ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಮರಣ ವಾರ್ತೆ ಕೇಳಿ ತೀವ್ರ ಧು:ಖಿತನಾದೆ, ಅವರ ವಿಯೋಗ ಸಮಾಜಕ್ಕೆ ತುಂಬಲಾರದ ನಷ್ಟ. ಹುಟ್ಟೂರು ಕೊಡಗು ಆದರೂ ತನ್ನ ಸೇವೆಗೆ ಕರಾವಳಿ ಭಾಗವನ್ನು ಆಯ್ಕೆ ಮಾಡಿದ ಶೈಖುನಾರವರು ಮುಸ್ಲಿಂ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ.

ಸುಮಾರು 25 ವರ್ಷಗಳ ಹಿಂದೆ ಈ ಸಮಾಜದಲ್ಲಿ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಯತೀಂ ಮಕ್ಕಳಿಗೆ ವಸತಿ ಸೌಕರ್ಯದೊಂದಿಗೆ ಗುಣಮಟ್ಟದ ಉಭಯ ಶಿಕ್ಷಣ ನೀಡಿ ಬೆಳೆಸಬೇಕೆಂಬ ಉದ್ದೇಶದೊಂದಿಗೆ ಆರಂಭಿಸಿದ ಅಲ್ ಮದೀನಾ ಎಂಬ ಸಂಸ್ಥೆ, ಶೈಖುನಾರವರು ಈ ಉಮ್ಮತ್ ಗೆ ನೀಡಿದ ಮಹಾ ಕೊಡುಗೆಯಾಗಿದೆ, ಇಂದು ಆ ಸಂಸ್ಥೆ ಬೆಳೆದು ಹೆಮ್ಮರವಾಗಿದೆ,ದೇಶ ವಿದೇಶಗಳಲ್ಲಿ ಅದರ ಕೀರ್ತಿ ಹಬ್ಬಿದೆ.

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ನ ಎಲ್ಲಾ ಕಾರ್ಯಕ್ರಮಗಳಿಗೂ ಉಸ್ತಾದರು ನೀಡಿದ ಸಹಾಯ ಸಹಕಾರ ಮತ್ತು ಪ್ರೋತ್ಸಾಹ ಎಂದೂ ಮರೆಯಲು ಸಾಧ್ಯವಿಲ್ಲ.ಅಲ್ಲಾಹು ಅವರ ಪದವಿಯನ್ನು ಉನ್ನತಿಗೇರಿಸಲಿ….ಎಂದು ಪ್ರಾರ್ಥಿಸುತ್ತಾ ಅವರ ವಿಯೋಗಕ್ಕೆ ಸಂತಾಪ ಸೂಚಿಸುವೆನು ಮೃತರ ಹೆಸರಿನಲ್ಲಿ ಮಯ್ಯಿತ್ ನಮಾಜು ನಿರ್ವಹಿಸಿ, ಖುರ್ ಆನ್ ಪಾರಾಯಣದೊಂದಿಗೆ ಪ್ರತ್ಯೇಕ ಪ್ರಾರ್ಥನೆ ನಡೆಸಲು ಈ ಮೂಲಕ ವಿನಂತಿಸುತ್ತೇನೆ.

ಆತೂರು ಸಅದ್ ಮುಸ್ಲಿಯಾರ್
(ಅಧ್ಯಕ್ಷರು ಎಸ್ ಜೆ ಎಂ ಕರ್ನಾಟಕ)

error: Content is protected !! Not allowed copy content from janadhvani.com