janadhvani

Kannada Online News Paper

ಕುದ್ಲೂರಿನಲ್ಲಿ ನಾಳೆ ಸುಲ್ತಾನುಲ್ ಉಲಮಾರ ಸಾರಥ್ಯದ ಮಸೀದಿ ಉದ್ಘಾಟನೆ

ಆತೂರು.ಜೂ,19: ಇಲ್ಲಿನ ಕುದ್ಲೂರು ಎಂಬಲ್ಲಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ಸಾರಥ್ಯದಲ್ಲಿ ನಿರ್ಮಾಣಗೊಂಡ ನವೀಕೃತ ಬದ್ರ್ ಜುಮ್ಮಾ ಮಸೀದಿಯ ಉದ್ಘಾಟನಾ ಕಾರ್ಯಕ್ರಮವು ನಾಳೆ(ಜೂ.20) ಮಧ್ಯಾಹ್ನ ನಡೆಯಲಿದೆ.

ಪ್ರಸ್ತುತ ಕಾರ್ಯಕ್ರಮದಲ್ಲಿ ಖುರ್ರತುಸ್ಸಾದಾತ್ ಕೂರತ್ ತಂಙಳ್,ಅಸ್ಸಯ್ಯಿದ್ದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಗುರುವಾಯನಕೆರೆ ಹಾಗೂ ಇನ್ನಿತರ ವಿದ್ವಾಂಸ, ನಾಯಕರು ಹಾಗೂ ಊರಿನ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಬದ್ರ್ ಜುಮ್ಮಾ ಮಸೀದಿ ಅಧ್ಯಕ್ಷ ಜನಾಬ್ ಇಬ್ರಾಹಿಂ ಹಾಜೀ ಪ್ರಕಟನೆಯಲ್ಲಿ ತಿಳಿಸಿದ್ದಾರೆ.