janadhvani

Kannada Online News Paper

ಇಂದು ಸೆರ್ಕಳ ನಗರದಲ್ಲಿ SBS ವತಿಯಿಂದ ಏಕದಿನ ಮತಪ್ರವಚನ

SBS ಸೆರ್ಕಳ ನಗರ ವತಿಯಿಂದ ಇಂದು ರಾತ್ರಿ 8 ಗಂಟೆಗೆ ಮತಪ್ರವಚನ ಕಾರ್ಯಕ್ರಮ ಸ್ಥಳೀಯ ಇಮಾಂ ಅಕ್ಬರ್ ಅಲಿ ಮದನಿ ಆಲಂಪಾಡಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸೆಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ದುಆ ಮಾಡಲಿದ್ದಾರೆ.ಸೆರ್ಕಳ ಖತೀಬ್ ಶಕೀರ್ ಸಅದಿ ಸಭೆಯನ್ನು ಉದ್ಘಾಟಿಸಲಿದ್ದಾರೆ.ಖ್ಯಾತ ಪ್ರಭಾಷಗಾರ ಲುಕ್ಮುನುಲ್ ಹಕೀಂ ಸಖಾಫಿ ಪುಲ್ಲಾರ. ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು SBS ಪ್ರ.ಕಾರ್ಯದರ್ಶಿ C.H ಮುಹಮ್ಮದ್ ಆಶಿಕ್ ಸೆರ್ಕಳ ನಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.