ದಮ್ಮಾಮ್: ಕರುನಾಡಿನ ಸುನ್ನೀ ಮುಸಲ್ಮಾನರ ಆವೇಶ ವೇದಿಕೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಇದರ ಅಲ್ ಅಹ್ಸಾ ಸೆಕ್ಟರ್ ವತಿಯಿಂದ ಇಂದು (14/12/18) ಜುಮಾ ನಮಾಝ್ ಬಳಿಕ ಸಅದಿಯಾ ಹಾಲ್ ಅಲ್ ಅಹ್ಸಾದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು.
ಪ್ರಥಮವಾಗಿ ಸೆಕ್ಟರ್ ವತಿಯಿಂದ ಮಾಸಂಪ್ರತೀ ನಡೆಸಲ್ಪಡುವ ಮಾಸಿಕ ಸ್ವಲಾತ್ ಮಜ್ಲಿಸ್ ಸೆಕ್ಟರ್ ಅಧ್ಯಕ್ಷ ಹಬೀಬುರ್ರಹ್ಮಾನ್ ಉಸ್ತಾದರ ನೇತೃತ್ವದಲ್ಲಿ ನಡೆಯಿತು, ನಂತರ ಮಹಾತ್ಮರ ಅನುಸ್ಮರಣಾ ಸಂಗಮ ನಡೆಯಿತು.

ಅನುಸ್ಮರಣಾ ಸಂಗಮವನ್ನು ಉದ್ದೇಶಿಸಿ ಮಾತನಾಡಿದ ಸೆಕ್ಟರ್ ಅಧ್ಯಕ್ಷ ಹಬೀಬುರ್ರಹ್ಮಾನ್ ಉಸ್ತಾದ್ “ಮುಹ್ಯುದ್ದೀನ್ ಶೈಖ್ ರವರ ಜೀವನ ಸತ್ಯ ಸಂಧತೆಯಿಂದ ಕೂಡಿತ್ತು, ಪರಿಶುಧ್ಧತೆಯ ಪ್ರತೀಕ ಅವರು, ಅವರ ಜೀವನ ನಮಗೆಲ್ಲಾ ಮಾದರಿ ಎಂದು ಭಾಷಣ ಮಾಡಿದರು,

ನಂತರ ಕೆ.ಸಿ.ಎಫ್ ನಲ್ಲಿ ಸಕ್ರೀಯವಾಗಿ ದುಡಿದ ಸದಸ್ಯನಿಗೆ ಕೊಡಲಾಗುವ ಓ ಖಾಲಿದ್ ಅವಾರ್ಡನ್ನು, ಸೆಕ್ಟರಿನ ಎಲ್ಲ ಕಾರ್ಯಾಚರಣೆಯಲ್ಲಿಯೂ ಸಕ್ರೀಯವಾಗಿ ಪಾಲ್ಗೊಂಡು, ಹಜ್ಜಾಜಿಗಳ ಸೇವೆ ಮಾಡುವ ಎಚ್.ವಿ.ಸಿ, ಯಲ್ಲಿಯೂ ಸೇವೆ ಗೈದು, ಇದೀಗ ಪ್ರವಾಸಿ ಜೀವನ ಕೊನೆಗೊಳಿಸಿ ತಾಯ್ನಾಡಿಗೆ ಮರಳುತ್ತಿರುವ ಅಬ್ಬಾಸ್ ವೀರಕಂಬರವರಿಗೆ ಶಾಮಿ ಎಂಬಸ್ಸಿ ಯ ಅಬ್ದುರ್ರಹ್ಮಾನ್ ರವರು ನೀಡಿ ಗೌರವಿಸಿದರು,

ಮಾತ್ರವಲ್ಲದೆ, ಸೆಕ್ಟರ್ ಸಮೀತಿಯ ವತಿಯಿಂದ ಶಾಲು ಹೊದಿಸಿ ಸನ್ಮಾನವನ್ನು ಮಾಡಲಾಯಿತು, ಕೆ.ಸಿ.ಎಫ್ ದಮ್ಮಾಮ್ ಝೋನ್ ಸದಸ್ಯ ಜಿ.ಕೆ. ಇಕ್ಬಾಲ್ ಗುಲ್ವಾಡಿ, ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಪಬ್ಲಿಷಿಂಗ್ ವಿಭಾಗ ಚಯರ್ಮೇನ್ ಅಶ್ರು ಬಜ್ಪೆ, ಕೆ.ಸಿ.ಎಫ್ ಅಲ್ ಅಹ್ಸಾ ಸೆಕ್ಟರ್ ಕಾರ್ಯದರ್ಶಿ ಕೆ.ಎಂ ಇರ್ಶಾದ್ ಪಕ್ಷಿಕೆರೆ, ಸೆಕ್ಟರ್ ಶಿಕ್ಷಣ ವಿಭಾಗ ಚಯರ್ಮೇನ್ ಇಸ್ಹಾಕ್ ಫಜೀರ್,ಸಂಘಟನಾ ವಿಭಾಗದ ಅಧ್ಯಕ್ಷ ಹಕೀಮ್ ನೆಕ್ಕರೆ, ಕೆ.ಸಿ.ಎಫ್ ಮುಬರ್ರಝ್ ಯೂನಿಟ್ ಅಧ್ಯಕ್ಷ ಅಸದುಲ್ಲಾ, ಕೆ.ಸಿ.ಎಫ್ ಹಫೂಫ್ ಈಸ್ಟ್ ಯೂನಿಟ್ ಅಧ್ಯಕ್ಷ ನಝೀರ್ ಹಯಾತ್,ಹೈದರ್ ಬಜ್ಪೆ, ಅಶ್ರಫ್ ಕಟ್ಟದಪಡ್ಪು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
‘ಸಮಸ್ತ’: ಇತಿಹಾಸ ಮತ್ತು ವರ್ತಮಾನದ ನೆನಪುಗಳನ್ನು ಮೆಲುಕು ಹಾಕಿದ ನಾಯಕರು
ಅನಿವಾಸಿಗಳಿಗೆ ಭಾರಿ ಹೊಡೆತ; ಪಾಸ್ಪೋರ್ಟ್ ದರಗಳಲ್ಲಿ ಗಣನೀಯ ಹೆಚ್ಚಳ- ಪರಿಷ್ಕೃತ ಶುಲ್ಕ ಜುಲೈ 1 ರಿಂದ ಜಾರಿ
ಗಲ್ಫ್ ಸೇರಿದಂತೆ ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ‘ಏರ್ ಸುವಿಧಾ’ ಡಿಕ್ಲರೇಷನ್ ಕಡ್ಡಾಯ
ಪಾಸ್ಪೋರ್ಟ್ ಮತ್ತು ಪೌರತ್ವದ ವಿರೋಧಾಭಾಸ – ಜಗತ್ತಿಗೆ ಭಾರತೀಯ, ಸ್ವದೇಶದಲ್ಲೇ ಪ್ರಶ್ನಾರ್ಹ?
ಆಧಾರ್ ಮತ್ತು ಪಾಸ್ಪೋರ್ಟ್ ಪೌರತ್ವ ದಾಖಲೆಯಲ್ಲ: ಹಾಗಾದ್ರೆ ನಿಜವಾದ ದಾಖಲೆ ಯಾವುದು?
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ