ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ನೀಡಿ ನಮ್ಮ ತೆರಿಗೆ ನಮ್ಮ ಹಕ್ಕು ಮತ್ತು ಹಿಂದೂಗಳು ಪಾವತಿಸುವ ತೆರಿಗೆ ಹಿಂದೂಗಳಿಗೆ ಮಾತ್ರ ವಿನಿಯೋಗವಾಗಬೇಕು ಎಂಬಿತ್ಯಾದಿಯಾಗಿ ಸಂಘ ಪ್ರೇರಿತ ಹೇಳಿಕೆ ನೀಡಿರುವ ವಿರುದ್ಧ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಪ್ರತಿಕ್ರಿಯಿಸಿದ್ದಾರೆ.
ಪೂಂಜಾ ಅವರು ಈ ದೇಶದ ವಿದೇಶೀ ವಿನಿಮಯ ಕಾನೂನು ಅಸ್ತಿತ್ವದಲ್ಲಿ ಇದೆಯೇ ಎಂಬ ಕನಿಷ್ಠ ಜ್ಞಾನವೂ ಇಲ್ಲದಂತೆ ವರ್ತಿಸುವುದು ಖೇದಕರ. ಹಿಂದೂಗಳ ತೆರಿಗೆ ಹಿಂದೂಗಳಿಗೆ ಎಂದು ಬುರುಡೆ ಬಿಡುವ ಪೂಂಜಾ ಹಾಲಿ ಅಸ್ತಿತ್ವದಲ್ಲಿರುವ ವಿದೇಶಿ ವಿನಿಮಯ ಕಾನೂನು ಅನ್ನು ರದ್ದತಿ ಮಾಡಲು ಆಗ್ರಹಿಸಲಿ!. ಈ ದೇಶಕ್ಕೆ ಪಾವತಿ ಆಗುವಂತಹ ಅಗಾಧ ವಿದೇಶಿ ವಿನಿಮಯ ಶುಲ್ಕ, ಅಬಕಾರಿ ಶುಲ್ಕ,ಸೀಮಾ ಶುಲ್ಕದಂತಹ ಭಾರತಕ್ಕೆ ಆಗುತ್ತಿರುವ ಆದಾಯ ಹಿಂದುಯೇತರ ಮೂಲಗಳಿಂದ ಬರುತ್ತಿದ್ದು,ಪೂಂಜಾನಂತಹ ಅವಿವೇಕಿ ಜನರು ಇದನ್ನು ಸರಿಯಾಗಿ ತಿಳಿಯಬೇಕೆಂದು ಅಶ್ರಫ್ ಹೇಳಿದ್ದಾರೆ.
ಈ ದೇಶದ ಸಾಮಾನ್ಯ ಜನರ ತೆರಿಗೆ, ಕರ, ಶುಲ್ಕಗಳು ಆಯಾ ಸೇವೆಗೆ ಅನುಗುಣವಾಗಿ ಸರ್ಕಾರ ವಸೂಲಿ ಮಾಡುತ್ತಿದ್ದು ಯಾವುದೇ ಧರ್ಮದ ಆಧಾರದಲ್ಲಿ ಅಲ್ಲ ಎಂದು ತಿಳಿಯಬೇಕು. ಈ ದೇಶದ ಬಹು ಸಂಖ್ಯಾತ ವೈದಿಕೇತರರ ತರಿಗೆಯು ಈ ದೇಶದ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡಲು ವಿನಿಯೋಗ ಆಗುತ್ತಿದೆ ಎಂಬುದನ್ನು ಅರಿಯಬೇಕು. ಈ ದೇಶದ ವೈದಿಕೇತರ ಮೂಲದ ತೆರಿಗೆಯಿಂದ ನಿರ್ಮಿಸಲಾದ ಅದೆಷ್ಟೋ ಸಂಸ್ಥೆಗಳನ್ನು ಹಾಲಿ ಕೇಂದ್ರ ಸರ್ಕಾರದಲ್ಲಿರುವ ಪ್ರತಿನಿಧಿ ಮುಖ್ಯಸ್ಥರು ಅಂಬಾನಿ,ಅದಾನಿ ಗೆ ಮಾರಾಟ ಮಾಡಿದ್ದು, ಇನ್ನು ಜನರು ಪಾವತಿಸುವ ತೆರಿಗೆ ಸಂಗ್ರಹಕ್ಕೂ ಅಂಬಾನಿ, ಅದಾನಿಗಳನ್ನು ನೇಮಿಸುವ ತಮ್ಮ ಷಡ್ಯಂತ್ರದ ಹೇಳಿಕೆಗೆ ಜನರು ಬಲಿಯಾಗಲಾರರು,ತಿಳಿದಿರಲಿ ಎಂದು ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್