ಅಬುಧಾಬಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಅಬುಧಾಬಿ ನಡೆಸುವ ದಾರುಲ್ ಅಮಾನ್ ವಸತಿ ನಿಲಯ ಯೋಜನೆಯ ನಾಲ್ಕನೇ ಮನೆಯ ಹಸ್ತಾಂತರವು ಫೆ. 3 ಶನಿವಾರ ಬೆಳ್ತಂಗಡಿ ತಾಲೂಕಿನ ಬದ್ಯಾರಿನಲ್ಲಿ ನಡೆಯಲಿದೆ.ದಶಮಾನೋತ್ಸವ ಸಂಭ್ರಮಿಸುತ್ತಿರುವ ಕೆಸಿಎಫ್ ವಿವಿಧ ಯೋಜನೆಗಳ ಮುಖಾಂತರ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಮೋಘ ಸೇವೆ ಸಲ್ಲಿಸುತ್ತಿರುವ ಸಂಘಟನೆಯ ಹಿರಿಮೆಗೆ ದಾರುಲ್ ಅಮಾನ್ ನೂತನ ವಸತಿಯು ಗರಿಯಾಗಿದೆ.



ಯುಎಇ ರಾಜಧಾನಿ ಅಬುಧಾಬಿಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಂದ (ಕೆಸಿಎಫ್ ಕಾರ್ಯಕರ್ತರು) ನಡೆಸಲ್ಪಡುವ ಕರುಣೆಯ ನೆರಳು ಯೊಜನೆಯ ದಾರುಲ್ ಅಮಾನ್ ವಸತಿಯ ನಾಲ್ಕನೇ ಫಲಾನುಬಾವಿಯಾಗಿ ಬೆಳ್ತಂಗಡಿ ತಾಲೂಕಿನ ಬದ್ಯಾರು ನಿವಾಸಿಯನ್ನು ಆಯ್ಕೆ ಮಾಡಲಾಗಿತ್ತು. ಇದೀಗ ವಸತಿಯ ಕಾಮಗಾರಿಯೂ ಸಂಪೂರ್ಣವಾಗಿದ್ದು, ಉಧ್ಘಾಟನೆಗೆ ಸಜ್ಜಾಗಿದೆ.
ಫೆ. 3 ರಂದು ನಡೆಯಲಿರುವ ಉಧ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಹಝ್ರತ್ ಫಾಝಿಲ್ ರಝ್ವಿ, ಮಲ್ಜಹ್ ವಿಧ್ಯಾ ಸಂಸ್ಥೆಯ ರುವಾರಿ ಜಲಾಲುದ್ದೀಬ್ ತಂಙಳ್, ಮನ್ಶರ್ ಸಂಸ್ಥೆಯ ರುವಾರಿ ಉಮರ್ ಅಸ್ಸಖಾಫ್ ತಂಙಳ್, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಲ್ ಸುಫ್ಯಾನ್ ಸಖಾಫಿ, ಎಸ್.ವೈ.ಎಸ್ ರಾಜ್ಯ ನಾಯಕರಾದ ಜಿ.ಎಂ ಕಾಮಿಲ್ ಸಖಾಫಿ, ಎಸ್.ಪಿ ಹಂಝ ಸಖಾಫಿ, ಮೆಹ್ಬೂಬ್ ಸಖಾಫಿ, ಹಫೀಲ್ ಸ ಅದಿ ಕೆಸಿಎಫ್ ಅಬುಧಾಬಿ ಝೋನ್ ನಾಯಕರಾದ ಹಸೈನಾರ್ ಅಮಾನಿ, ರಝಾಕ್ ಹಾಜಿ ಜೆಲ್ಲಿ ಹಾಗೂ ಹಕೀಂ ತುರ್ಕಳಿಕೆ ನವಾಜ್ ಹಾಜಿ ಕೊಟೆಕಾರ್ ಉಮ್ಮರ್ ಈಶ್ವರಮಂಗಿಲ NK ಸಿದ್ದೀಕ್ ಅಳಿಕೆ ಸೇರಿದಂತೆ ಸ್ಥಳೀಯ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ಸದಸ್ಯರು ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ