ಮಂಜನಾಡಿ:ಅಲ್-ಮದೀನಾ ದಅ್ ವಾ ಕಾಲೇಜ್ ವಿಧ್ಯಾರ್ಥಿ ಸಂಘಟನೆ ಬಿಶಾರತುಲ್ ಮದೀನಾ ವಿಧ್ಯಾರ್ಥಿ ಒಕ್ಕೂಟ ಹಾಗು ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಅಲ್-ಮದೀನಾ ಕ್ಯಾಂಪಸ್ ವತಿಯಿಂದ ಕಾಶ್ಮೀರದ ಗುಜ್ಜಾರ್ ಸಮುದಾಯದ 8 ವಯಸ್ಸಿನ ಕಂದಮ್ಮ ಆಸಿಫಾ ಬಾನುವಿನ ದಾರುಣ ಕೊಲೆಯ ವಿರುದ್ಧ ಪ್ರತಿಭಟನಾ ಸಭೆ ಏಪ್ರಿಲ್ 18 ರಂದು ಅಲ್-ಮದೀನಾ ಮಂಜನಾಡಿ ಕ್ಯಾಂಪಸ್ ಮುಂಭಾಗದಲ್ಲಿ ನಡೆಯಿತು.
ಆಸಿಫಾ ಬಾನು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ರಾಷ್ಟ್ರದ ಕಾವಲಾಳುಗಳಾದ ಪೊಲೀಸ್ ಅಧಿಕಾರಿಗಳೇ ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗುವುದು ಖೇದಕರ, 7 ದಿನಗಳ ಕಾಲ ಗಾಂಜಾ ಮಾದಕಗಳನ್ನು ನೀಡಿ ಅತ್ಯಾಚಾರ ಮಾಡಿ ದಾರುಣವಾಗಿ ನಡೆಸಿದ ಕೊಲೆ ಖಂಡನಾರ್ಹ, ಆಸಿಫಾಳನ್ನು ಕೊಂದ ಕ್ರೂರಿಗಳನ್ನು ಬಂಧಿಸಿ ನಮಗೆ ನ್ಯಾಯ ಕೊಡಿ ಎಂದು ಪ್ರತಿಭಟನಾ ಸಭೆ ಅಭಿಪ್ರಾಯ ವ್ಯಕ್ತಪಡಿಸಿತು.
BMSA ಅಧ್ಯಕ್ಷ ಇಫಾಝ್ ತಮೀಮ್ ದೇರಳಕಟ್ಟೆ ಯವರ ಅಧ್ಯಕ್ಷತೆಯಲ್ಲಿ SSF ಅಲ್-ಮದೀನಾ ಕ್ಯಾಂಪಸ್ ಅಧ್ಯಕ್ಷ ಅಮಾನ್ ವಳಾಲ್ ಉದ್ಘಾಟಿಸಿದರು.
BMSA ಸದಸ್ಯ ಅಲ್-ಮದೀನಾ ವಿಧ್ಯಾರ್ಥಿ ಸಅದ್ ಮೊಂಟುಗೋಳಿ ದಿಕ್ಸೂಚಿ ಭಾಷಣ ಮಾಡಿದರು.
BMSA ಉಪಾಧ್ಯಕ್ಷ ಸಯ್ಯದ್ ಸಾಹಿಲ್ ಅಲ್-ಹಾದಿ ಬಿಸಿರೋಡ್,ಕೋಶಾಧಿಕಾರಿ ಸಿದ್ದೀಕ್ ಎಮ್ಮೆಮಾಡ್ ಉಪಸ್ಥಿತಿ ಇದ್ದರು.
BMSA ಪ್ರ.ಕಾರ್ಯದರ್ಶಿ ಜುನೈದ್.ಟಿ ಇರಾ ಸ್ವಾಗತಿಸಿ ನೌಫಲ್ ಮಲಾರ್ ವಂಧಿಸಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಮ್ ಮತ ಸ್ಥಿತಿಗತಿ ಇಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸುದೃಢಗೊಳಿಸಿದೆ,ರಾಜಣ್ಣ ಅರಿಯಲಿ: ಕೆ.ಅಶ್ರಫ್
ಮೊಂಟೆಪದವು ಗುಡ್ಡ ಕುಸಿತ: ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಗು ಮೃತ್ಯು- ತಾಯಿಯ ರಕ್ಷಣೆ
ದೇರಳಕಟ್ಟೆ : ಮನೆಯ ತಡೆಗೋಡೆ ಕುಸಿದು 10 ವರ್ಷದ ಪುಟ್ಟ ಬಾಲಕಿ ಮೃತ್ಯು
ಭಾರೀ ಮಳೆ: ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಪುಟ್ಟ ಮಗು ಸಹಿತ ಇಬ್ಬರು ಮೃತ್ಯು
ಸದಾ ಸಮುದಾಯದ ಪರ ಧ್ವನಿಯೆತ್ತುವ ಅಲ್ಪಸಂಖ್ಯಾತ ಸಚಿವರು ಕರಾವಳಿಗೆ ಭೇಟಿ ನೀಡದಿರಲು ಕಾರಣವೇನು?
ಉಲಮಾ ಒಕ್ಕೂಟದ ವಖ್ಫ್ ಪ್ರತಿಭಟನೆ : ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಸಂಘಟಕರು
ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್ ಬಂಟ್ವಾಳ ಮೈನಾರಿಟಿ ಅಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ
ಮುಸ್ಲಿಮ್ ಬಸ್ ಪ್ರಯಾಣಿಕನ ಮೇಲೆ ಹಲ್ಲೆ: ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು- ಕೆ.ಅಶ್ರಫ್
ಸರಕಾರದ ಆದೇಶ, ತುಳುನಾಡಿನ ಜನತೆಯ ಒಗ್ಗಟ್ಟಿನ ಹೋರಾಟದ ಫಲ- ಮುನೀರ್ ಕಾಟಿಪಳ್ಳ
ಮುಸ್ಲಿಮ್ ವರ್ತಕರ ಮೇಲೆ ಹಲ್ಲೆ: ಮುಸ್ಲಿಮ್ ಮುಖಂಡರ ಭೇಟಿ, ಗಂಭೀರ ಪರಿಗಣನೆ- ಕೆ.ಅಶ್ರಫ್