ವಿಶ್ವಸಂಸ್ಥೆ, ಅ 10: – ಅಫ್ಘಾನಿಸ್ತಾನದ ಉತ್ತರ ಕುಂಡುಜ್ ಪ್ರಾಂತ್ಯದ ಶಿಯಾ ಸಮುದಾಯದ ಮಸೀದಿಯೊಂದರ ಮೇಲೆ ಕಳೆದ ಶುಕ್ರವಾರ ನಡೆದ ಭೀಕರ ಬಾಂಬ್ ದಾಳಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯು ಎನ್ ಎಸ್ ಸಿ ) ಖಂಡಿಸಿದೆ. ಈ ದಾಳಿಯಲ್ಲಿ ಹಲವು ಮಂದಿ ಮೃತಪಟ್ಟಿದ್ದರು.
ಭಯೋತ್ಪಾದನೆ ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಗೆ ಅತ್ಯಂತ ಗಂಭೀರವಾದ ಬೆದರಿಕೆಯಾಗಿದೆ ಎಂದು ಹೇಳಿರುವ ಭದ್ರತಾ ಮಂಡಳಿ ಸದಸ್ಯರು. ಈ ಖಂಡನೀಯ ಭಯೋತ್ಪಾದಕ ಕೃತ್ಯದ ಸಂಚುಕೋರರು, ಪ್ರಾಯೋಜಕರು ಹಾಗೂ ಹಣಕಾಸು ಪೂರೈಸುವ ವ್ಯಕ್ತಿಗಳು ಹಾಗೂ ಗುಂಪುಗಳನ್ನು ಗುರುತಿಸಿ ನ್ಯಾಯದ ಕಕ್ಷೆಗೆ ಒಳಪಡಿಸಿ ಉಗ್ರವಾಗಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕೂ ಮುನ್ನ ಶನಿವಾರ, ಐರೋಪ್ಯ ಒಕ್ಕೂಟದ ಬಾಹ್ಯ ಕ್ರಿಯಾ ಸೇವೆ (ಇಇಎಎಸ್) ಬಾಂಬ್ ದಾಳಿಯ ಸಂಪೂರ್ಣ ಹೊಣೆಗಾರಿಕೆಯನ್ನು ವಹಿಸಿಕೊಂಡಿರುವ ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಗುಂಪನ್ನು ನ್ಯಾಯದ ಕಕ್ಷೆಗೆ ಒಳಪಡಿಸಬೇಕು. ಬದುಕುವ ಹಕ್ಕು, ಜನಾಂಗೀಯ, ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳು ಸೇರಿದಂತೆ ಎಲ್ಲಾ ಅಫ್ಘನ್ ನಾಗರಿಕರ ಹಕ್ಕುಗಳನ್ನು ಗೌರವಿಸಿ ರಕ್ಷಿಸಬೇಕು ಎಂದು ಒತ್ತಿಹೇಳಿದೆ.
















ಇನ್ನಷ್ಟು ಸುದ್ದಿಗಳು
ದಾಳಿಗಳು ಮುಂದುವರಿದರೆ ‘ನರಕಸದೃಶ’ ತಿರುಗೇಟು ನೀಡಲಾಗುವುದು- ಇರಾನ್ ಎಚ್ಚರಿಕೆ
ಮತ್ತೆ ಯುದ್ಧವೇ? – ಎರಡನೇ ದಿನವೂ ಇರಾನ್ ಮೇಲೆ ಯುಎಸ್ ದಾಳಿ
ಬಹ್ರೇನ್ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾ ತೀವ್ರ ಖಂಡನೆ- ಪೂರ್ಣ ಬೆಂಬಲ ಘೋಷಣೆ
ನಕಲಿ ವೆಬ್ಸೈಟ್ಗಳ ವಿರುದ್ಧ ಜಾಗ್ರತೆ- ಸೌದಿ ವಾಣಿಜ್ಯ ಸಚಿವಾಲಯ ಎಚ್ಚರಿಕೆ
ಹಾರ್ಮುಜ್ ಜಲಸಂಧಿ ಸಂಘರ್ಷ: ಇರಾನ್ ಮೇಲೆ ಮತ್ತೆ ಅಮೆರಿಕ ಸೇನೆ ದಾಳಿ
ಇಸ್ರೇಲ್ ಸೈನ್ಯ ಗಾಜಾದಲ್ಲಿ ನಡೆಸಿದ ನರಮೇಧ : ಎರಡು ವರ್ಷಗಳಲ್ಲಿ 20,000 ಮಕ್ಕಳ ಹತ್ಯೆ- ವಿಶ್ವಸಂಸ್ಥೆ ವರದಿ
ಮಕ್ಕಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಧೂಳಿನ ಬಿರುಗಾಳಿ ಮುಂದುವರಿಕೆ- ಹಲವು ಭಾಗಗಳಲ್ಲಿ ಮಳೆ
ಶಾಂತಿ ಮರೀಚಿಕೆ…?: ಲೆಬನಾನ್ನಲ್ಲಿ ದಾಳಿ ತೀವ್ರಗೊಳಿಸಿದ ಇಸ್ರೇಲ್- ಮತ್ತೆ ಹಾರ್ಮುಝ್ ಬಂದ್!
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ