ದೋಹಾ: ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದಂತೆ, ಕತಾರ್ನಲ್ಲಿ ನಿರ್ಬಂಧಗಳನ್ನು ಪುನಃ ಸ್ಥಾಪಿಸಲಾಗುತ್ತಿದೆ. ಮಾರ್ಚ್ 26 ರ ಶುಕ್ರವಾರದಿಂದ ಹೆಚ್ಚಿನ ನಿರ್ಬಂಧಗಳು ಜಾರಿಗೆ ಬರಲಿವೆ. ಅದಕ್ಕೆ ತಕ್ಕಂತೆ ಹೊಸ ಆದೇಶಗಳನ್ನು ಕೆಳಗೆ ನಮೂದಿಸಲಾಗಿದೆ.
- ಕೇವಲ ಶೇಕಡಾ 80 ಉದ್ಯೋಗಿಗಳಿಗೆ ಮಾತ್ರ ಸರ್ಕಾರಿ ಮತ್ತು ಖಾಸಗಿ ವಲಯದ ಕಚೇರಿಗಳಲ್ಲಿ ಹಾಜರಾಗಬೇಕು.ಮತ್ತು ಉಳಿದ 20% ಜನರು ಮನೆಯಿಂದಲೇ ಕೆಲಸ ಮಾಡಬೇಕು.
- ಐದಕ್ಕಿಂತ ಹೆಚ್ಚು ಜನರು ಕಚೇರಿಯ ಸಭೆಗಳಿಗೆ ಹಾಜರಾಗಬಾರದು.
- ವಿವಾಹ ಸಮಾರಂಭಗಳನ್ನು ಅನುಮತಿಸಲಾಗುವುದಿಲ್ಲ.
- ಸಾರ್ವಜನಿಕ ಉದ್ಯಾನವನಗಳು, ಕಡಲತೀರಗಳು ಮತ್ತು ಕಾರ್ನೀಶ್ ಗಳಲ್ಲಿನ ಆಟದ ಮೈದಾನಗಳನ್ನು ಮುಚ್ಚಲಾಗುವುದು.
- ಚಾಲನಾ ಶಾಲೆಗಳನ್ನು ಮುಚ್ಚಲಾಗುವುದು.
- ಚಿತ್ರಮಂದಿರಗಳಲ್ಲಿ ಶೇ.20 ಮಂದಿಗೆ ಮಾತ್ರ ಪ್ರವೇಶವಿದೆ, ಮತ್ತು 18 ವರ್ಷಕ್ಕಿಂತ ಕೆಳಗಿನವರಿಗೆ ಪ್ರವೇಶವಿಲ್ಲ.
- ಖಾಸಗಿ ಶಿಕ್ಷಣ ಕೇಂದ್ರಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ಆನ್ಲೈನ್ ಕಲಿಕೆ ಮಾತ್ರ.
- ಸಾರ್ವಜನಿಕ ವಸ್ತು ಸಂಗ್ರಹಾಲಯಗಳು ಮತ್ತು ಗ್ರಂಥಾಲಯಗಳ ಸಾಮರ್ಥ್ಯವು ಶೇಕಡಾ 30 ಮೀರಬಾರದು.
- ಸಚಿವಾಲಯದ ಅನುಮತಿಯಿಲ್ಲದೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬಾರದು.
- 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶಾಪಿಂಗ್ ಸಂಕೀರ್ಣಗಳಿಗೆ ಪ್ರವೇಶವಿಲ್ಲ.
- ಶಾಪಿಂಗ್ ಸಂಕೀರ್ಣಗಳ ಕಾರ್ಯಾಚರಣೆಯು ಕೇವಲ ಮೂವತ್ತು ಶೇಕಡಾ ಸಾಮರ್ಥ್ಯವನ್ನು ಹೊಂದಿದೆ.
- ಶಾಪಿಂಗ್ ಸಂಕೀರ್ಣಗಳಲ್ಲಿನ ಪ್ರಾರ್ಥನಾ ಕೊಠಡಿಗಳನ್ನು ಮುಚ್ಚಬೇಕು.
- ಫುಡ್ ಕೋರ್ಟ್ ಗಳಲ್ಲಿ ಹೋಂ ಡೆಲಿವರಿ ಮಾತ್ರ.
- ಒಳಾಂಗಣದ ರೆಸ್ಟೋರೆಂಟ್ಗಳು ಮತ್ತು ಕೆಫೆಟೇರಿಯಾಗಳ ಕಾರ್ಯಾಚರಣಾ ಸಾಮರ್ಥ್ಯವು 15% ಮೀರಬಾರದು.
- ಕ್ಲೀನ್ ಕತಾರ್ ಯೋಜನೆಯಡಿಯ ಹೋಟೆಲ್ಗಳು ಮತ್ತು ಕೆಫೆಟೇರಿಯಾಗಳು ಶೇಕಡಾ 50 ರಷ್ಟು ಸಾಮರ್ಥ್ಯದಲ್ಲಿ ಮತ್ತು ಉಳಿದವು ಶೇಕಡಾ 30 ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಲ್ಲವು.
- ಕೇವಲ 30% ಜನರಿಗೆ ಮಾತ್ರ ಸಾರ್ವಜನಿಕ ಮಾರುಕಟ್ಟೆಗಳಿಗೆ ಪ್ರವೇಶವಿದೆ ಮತ್ತು 12 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ.
- ಮನೋರಂಜನಾ ಉದ್ಯಾನವನಗಳನ್ನು ಮುಚ್ಚಲಾಗುವುದು.
- ಜಿಮ್ನಾಷಿಯಂಗಳು ಮತ್ತು ಮಸಾಜ್ ಪಾರ್ಲರ್ಗಳನ್ನು ಮುಚ್ಚಬೇಕು.
- ಈಜುಕೊಳಗಳು ಮತ್ತು ವಾಟರ್ ಪಾರ್ಕ್ಗಳನ್ನು ಸಹ ಅನುಮತಿಸಲಾಗುವುದಿಲ್ಲ.
- ಖಾಸಗಿ ಆಸ್ಪತ್ರೆಗಳು ಕೇವಲ 70 ಪ್ರತಿಶತದಷ್ಟು ಮಾತ್ರ ಕಾರ್ಯನಿರ್ವಹಿಸಲಿದೆ.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್