ಅರಾರ್/ರಿಯಾದ್: ಮೂರು ದಶಕಗಳಿಂದ ಮುಚ್ಚಲ್ಪಟ್ಟಿದ್ದ ಸೌದಿ ಅರೇಬಿಯಾ ಮತ್ತು ಇರಾಕ್ನ ಗಡಿಯಾಗಿರುವ ಅಲ್ ಜದೀದ ಅರಾರ್ ಕ್ರಾಸಿಂಗ್ ಅನ್ನು ಅಕ್ಟೋಬರ್ 15 ರಿಂದ ವಾಣಿಜ್ಯ ಬಳಕೆಗಾಗಿ ತೆರೆಯಲಾಗುವುದು ಎಂದು ಇರಾಕ್ನ ಸೌದಿ ರಾಯಭಾರಿ ಅಬ್ದುಲ್ ಅಝೀಝ್ ಅಲ್ ಶಮ್ರಿ ಹೇಳಿದ್ದಾರೆ.
1990 ರಲ್ಲಿ ಇರಾಕಿ ದೊರೆ ಸದ್ದಾಂ ಹುಸೈನ್ ಅವರ ಕುವೈತ್ ಆಕ್ರಮಣದೊಂದಿಗೆ ಸೌದಿ ಗಡಿಯನ್ನು ಮುಚ್ಚಲಾಗಿತ್ತು. ರಾಜತಾಂತ್ರಿಕ ಸಂಬಂಧಗಳ ಪುನರ್ ರಚನೆಯ ಭಾಗವಾಗಿ ಕುವೈತ್ನ ಆಕ್ರಮಣದ ಬಳಿಕ ಸೌದಿ ಅರೇಬಿಯಾ 2015 ರಲ್ಲಿ ಇರಾಕ್ನಲ್ಲಿ ತನ್ನ ರಾಯಭಾರ ಕಚೇರಿಯನ್ನು ಮತ್ತೆ ತೆರೆಯಿತು. ಪ್ರಸಕ್ತ ಹಜ್ ಸೀಝನ್ನಲ್ಲಿ ಹಜ್ಜಾಜ್ಗಳ ಆಗಮನಕ್ಕಾಗಿ ಮಾತ್ರ ಈ ಗಡಿಯನ್ನು ತೆರೆಯಲಾಗುತ್ತಿತ್ತು. 2017ರಲ್ಲಿ ಸೌದಿಯ ವಿದೇಶಾಂಗ ಸಚಿವರಾಗಿದ್ದ ಆದಿಲ್ ಅಲ್-ಝುಬೈರ್ ಅವರ ಇರಾಕ್ ಭೇಟಿಯೊಂದಿಗೆ ಗಡಿಯನ್ನು ಮತ್ತೆ ತೆರೆಯಲು ನಿರ್ಧರಿಸಲಾಯಿತು.
ಕಳೆದ ಹಲವು ವರ್ಷಗಳಿಂದ ಗಡಿ ವಿಚಾರದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಸೌದಿ ರಾಯಭಾರಿ ಅಬ್ದುಲ್ ಅಝೀಝ್ ಅಲ್-ಶಮ್ಮರಿ ಹೇಳಿದ್ದಾರೆ, ಉಭಯ ದೇಶಗಳ ವ್ಯಾಪಾರ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುತ್ತಿವೆ ಮತ್ತು ಅದು ಹೆಚ್ಚಿನ ವಾಣಿಜ್ಯ ವಹಿವಾಟಿಗೆ ದಾರಿ ಮಾಡಿಕೊಡಲಿವೆ ಎಂದು ಅವರು ಹೇಳಿದರು.
ಹೊಸ ನಿರ್ಧಾರದೊಂದಿಗೆ ಇರಾಕ್ ತನ್ನ ಅರಬ್ ಪರಂಪರೆಗೆ ಮರಳಲು ಮತ್ತು ಇರಾಕ್ನೊಂದಿಗಿನ ಇತರ ಅರಬ್ ರಾಷ್ಟ್ರಗಳ ಸಂಬಂಧವನ್ನು ಬಲಪಡಿಸಲು ಸಹಾಯವಾಗಲಿದೆ ಎಂದು ಇರಾಕ್ ಸಂಸತ್ ಸದಸ್ಯ ಜಾಬಿರ್ ಅಲ್-ಜಾಬಿರಿ ಹೇಳಿದ್ದಾರೆ.















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ