ಅರಾರ್/ರಿಯಾದ್: ಮೂರು ದಶಕಗಳಿಂದ ಮುಚ್ಚಲ್ಪಟ್ಟಿದ್ದ ಸೌದಿ ಅರೇಬಿಯಾ ಮತ್ತು ಇರಾಕ್ನ ಗಡಿಯಾಗಿರುವ ಅಲ್ ಜದೀದ ಅರಾರ್ ಕ್ರಾಸಿಂಗ್ ಅನ್ನು ಅಕ್ಟೋಬರ್ 15 ರಿಂದ ವಾಣಿಜ್ಯ ಬಳಕೆಗಾಗಿ ತೆರೆಯಲಾಗುವುದು ಎಂದು ಇರಾಕ್ನ ಸೌದಿ ರಾಯಭಾರಿ ಅಬ್ದುಲ್ ಅಝೀಝ್ ಅಲ್ ಶಮ್ರಿ ಹೇಳಿದ್ದಾರೆ.
1990 ರಲ್ಲಿ ಇರಾಕಿ ದೊರೆ ಸದ್ದಾಂ ಹುಸೈನ್ ಅವರ ಕುವೈತ್ ಆಕ್ರಮಣದೊಂದಿಗೆ ಸೌದಿ ಗಡಿಯನ್ನು ಮುಚ್ಚಲಾಗಿತ್ತು. ರಾಜತಾಂತ್ರಿಕ ಸಂಬಂಧಗಳ ಪುನರ್ ರಚನೆಯ ಭಾಗವಾಗಿ ಕುವೈತ್ನ ಆಕ್ರಮಣದ ಬಳಿಕ ಸೌದಿ ಅರೇಬಿಯಾ 2015 ರಲ್ಲಿ ಇರಾಕ್ನಲ್ಲಿ ತನ್ನ ರಾಯಭಾರ ಕಚೇರಿಯನ್ನು ಮತ್ತೆ ತೆರೆಯಿತು. ಪ್ರಸಕ್ತ ಹಜ್ ಸೀಝನ್ನಲ್ಲಿ ಹಜ್ಜಾಜ್ಗಳ ಆಗಮನಕ್ಕಾಗಿ ಮಾತ್ರ ಈ ಗಡಿಯನ್ನು ತೆರೆಯಲಾಗುತ್ತಿತ್ತು. 2017ರಲ್ಲಿ ಸೌದಿಯ ವಿದೇಶಾಂಗ ಸಚಿವರಾಗಿದ್ದ ಆದಿಲ್ ಅಲ್-ಝುಬೈರ್ ಅವರ ಇರಾಕ್ ಭೇಟಿಯೊಂದಿಗೆ ಗಡಿಯನ್ನು ಮತ್ತೆ ತೆರೆಯಲು ನಿರ್ಧರಿಸಲಾಯಿತು.
ಕಳೆದ ಹಲವು ವರ್ಷಗಳಿಂದ ಗಡಿ ವಿಚಾರದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಸೌದಿ ರಾಯಭಾರಿ ಅಬ್ದುಲ್ ಅಝೀಝ್ ಅಲ್-ಶಮ್ಮರಿ ಹೇಳಿದ್ದಾರೆ, ಉಭಯ ದೇಶಗಳ ವ್ಯಾಪಾರ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುತ್ತಿವೆ ಮತ್ತು ಅದು ಹೆಚ್ಚಿನ ವಾಣಿಜ್ಯ ವಹಿವಾಟಿಗೆ ದಾರಿ ಮಾಡಿಕೊಡಲಿವೆ ಎಂದು ಅವರು ಹೇಳಿದರು.
ಹೊಸ ನಿರ್ಧಾರದೊಂದಿಗೆ ಇರಾಕ್ ತನ್ನ ಅರಬ್ ಪರಂಪರೆಗೆ ಮರಳಲು ಮತ್ತು ಇರಾಕ್ನೊಂದಿಗಿನ ಇತರ ಅರಬ್ ರಾಷ್ಟ್ರಗಳ ಸಂಬಂಧವನ್ನು ಬಲಪಡಿಸಲು ಸಹಾಯವಾಗಲಿದೆ ಎಂದು ಇರಾಕ್ ಸಂಸತ್ ಸದಸ್ಯ ಜಾಬಿರ್ ಅಲ್-ಜಾಬಿರಿ ಹೇಳಿದ್ದಾರೆ.















ಇನ್ನಷ್ಟು ಸುದ್ದಿಗಳು
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ