janadhvani

Kannada Online News Paper

ಕೇರಳ‌ ಪ್ರವಾಹ ಸಂತ್ರಸ್ತರಿಗಾಗಿ ಜುಮಾ ನಂತರ ಧನ ಸಂಗ್ರಹ ಮಾಡಲು ಸುನ್ನೀ ನಾಯಕರ ಮನವಿ

ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಭೂಪಾತಕ್ಕೆ ಸಿಲುಕಿ ಅಲ್ಲೋಲ ಕಲ್ಲೋಲವಾಗಿರುವ ಕೇರಳ ಜನತೆಗೆ ಸಹಾಯ ಮಾಡಲು ಕೇರಳ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಘೋಷಿಸಿದ ಸಹಾಯನಿಧಿಯೊಂದಿಗೆ ಕೈ ಜೋಡಿಸಲು ನಾಳೆ (ಆಗಸ್ಟ್ 17 ಶುಕ್ರವಾರ) ಜುಮಾ ನಮಾಝ್ ನಂತರ ಎಲ್ಲಾ ಮಸ್ಜಿದ್ ಗಳಲ್ಲಿ ಧನ ಸಂಗ್ರಹ ನಡೆಸಿ ಸುನ್ನೀ ಕೋ ಆರ್ಡಿನೇಶನ್ ಸಮಿತಿಗೆ ತಲುಪಿಸಬೇಕೆಂದು ರಾಜ್ಯ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಕೋ ಆರ್ಡಿನೇಶನ್ ಸಮಿತಿ ಅಧ್ಯಕ್ಷ ಶರಫುಲ್ ಉಲಮಾ ಪಿ. ಎಂ.ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಜಿ.ಎಂ.ಕಾಮಿಲ್ ಸಖಾಫಿ , ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಎಸ್.ಇ.ಡಿ.ಸಿ.ಅಧ್ಯಕ್ಷ ಕೆಕೆಎಂ ಕಾಮಿಲ್ ಸಖಾಫಿ,ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.