janadhvani

Kannada Online News Paper

ಇಂದು ಬೆಂಗಳೂರಿನಲ್ಲಿ ಗ್ರಾಂಡ್ ರೂಹಾನಿ ಇಜ್ತಿಮಾ

ರೂಹಾನಿ ಸಮ್ಮೇಳನವನ್ನು ಮುಸ್ಲಿಂ ಜಮಾಅತ್ ಅಧ್ಯಕ್ಷ ಹುಸೈನ್ ಮಿಸ್ಬಾಹಿ ಅಧ್ಯಕ್ಷತೆಯಲ್ಲಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.

ಬೆಂಗಳೂರು: ರಮಝಾನ್ 21ನೇ ರಾತ್ರಿ, ಜಿಲ್ಲೆಯ ಅತ್ಯಂತ ದೊಡ್ಡ ಧಾರ್ಮಿಕ ಸಮ್ಮೇಳನವಾದ ರೂಹಾನಿ ಇಜ್ತಿಮ್ ಇಂದು ಸಂಜೆ 4 ಗಂಟೆಯಿಂದ ಖುದ್ದೂಸಾಬ್ ಈದ್ಗಾಹ್ ಮೈದಾನದಲ್ಲಿ ಆರಂಭವಾಗಲಿದೆ.

ಸಂಜೆ 4.30ಕ್ಕೆ ನಾಸಿರ್ ಅಹ್ಸನಿ ಉಸ್ತಾದರ ನೇತೃತ್ವದಲ್ಲಿ ಜೆ.ಸಿ ನಗರದಲ್ಲಿ ಝಿಯಾರತ್ ಮೂಲಕ ಕಾರ್ಯಕ್ರಮಕ್ಕೆ ಪ್ರಾರಂಭಿಸಲಾಗುವುದು.
ಸಂಜೆ 5ಕ್ಕೆ ಮಹ್ಲರತುಲ್ ಬದರಿಯಾ ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಬಶೀರ್ ಸ‌ಅದಿ ನೇತೃತ್ವದಲ್ಲಿ ನಡೆಯಲಿದೆ.

ಸಂಜೆ 6ಕ್ಕೆ ನಡೆಯುವ ಇಫ್ತಾರ್ ಸಮಾರಂಭವು ಸಯ್ಯದ್ ಇಬ್ರಾಹಿಂ ಬಾಫಖಿ ತಂಙಳ್ ಅಧ್ಯಕ್ಷತೆಯಲ್ಲಿ, ಮಾಜಿ ಕೇಂದ್ರ ಸಚಿವ ಸಿ.ಎಮ್. ಇಬ್ರಾಹಿಂ ಉದ್ಘಾಟಿಸುತ್ತಾರೆ. ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು.

ಮಗ್ರಿಬ್ ನಂತರ ಫ್ಯಾಮಿಲಿ ಮೀಟ್‌ನಲ್ಲಿ ಪ್ರಮುಖ ಉಪನ್ಯಾಸಕ ಮತ್ತು ಲೇಖಕ ಇಬ್ರಾಹಿಂ ಸಖಾಫಿ ಪುಝಕ್ಕಾಟ್ಟಿರಿ ತರಗತಿಯನ್ನು ನಡೆಸಲಿದ್ದಾರೆ.

ತರಾವೀಹ್ ನಿಸ್ಕಾರದ ನಂತರ ದಿಕ್ರ್ ದುವಾ ಮಜ್ಲಿಸ್ ಗೆ ಸಯ್ಯಿದ್ ಝೈನುಲ್ ಆಬಿದೀನ್ ಕೂರಿಕ್ಕುಝಿ ತಂಗಳ್ ನೇತೃತ್ವ ವಹಿಸಲಿದ್ದಾರೆ.

ರೂಹಾನಿ ಸಮ್ಮೇಳನವನ್ನು ಮುಸ್ಲಿಂ ಜಮಾಅತ್ ಅಧ್ಯಕ್ಷ ಹುಸೈನ್ ಮಿಸ್ಬಾಹಿ ಅಧ್ಯಕ್ಷತೆಯಲ್ಲಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.

ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳ ವಿವಿಧ ವ್ಯಕ್ತಿತ್ವಗಳು ಭಾಗವಹಿಸುವ ಈ ಕಾರ್ಯಕ್ರಮಕ್ಕೆ ಖುದ್ದೂಸ್ ಸಾಬ್ ಈದ್ಗಾಹ್ ಮೈದಾನದಲ್ಲಿ ಸುಮಾರು ಐದು ಸಾವಿರ ಮಂದಿಗೆ ಇಫ್ತಾರ್‌ಗೆ ಎಲ್ಲಾ ವ್ಯವಸ್ಥೆ ಗಳನ್ನು ಮಾಡಲಾಗಿದೆ.