janadhvani

Kannada Online News Paper

ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ

ಬಂಟ್ವಾಳ : ಕರ್ನಾಟಕ ಮುಸ್ಲಿಂ ಜಮಾತ್ ಎಸ್ಸಸ್ಸೇಫ್ & ಎಸ್ ವೈ ಎಸ್ ವತಿಯಿಂದ ಮೊದಲ ಹಂತದ ರಮಳಾನ್ ಕಿಟ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಗೂಡಿನಬಳಿ ಘಟಕ ಅಧ್ಯಕ್ಷರಾದ ಮುಸ್ತಾಕ್ ಖಾಮಿಲ್ ಸಖಾಫಿ ದುವಾ ನಡೆಸಿದರು. ಮುಸ್ಲಿಂ ಜಮಾತ್ ನಾಯಕರಾದ ರಝಾಕ್ ಹಾಜಿ ನೇತೃತ್ವ ದಲ್ಲಿ ಸಾಮೂಹಿಕ ಕಿಟ್ ವಿತರಣೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಸ್ಜಿದ್ -ಏ- ಮುತ್ತಲಿಬ್ ಗೂಡಿನಬಳಿ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಹಾಜಿ, ಎಸ್ಸಸ್ಸೇಫ್ ಅಧ್ಯಕ್ಷರಾದ ಅಲೀಮ್ ,ಉಪಾಧ್ಯಕ್ಷರಾದ ಶಫೀಕ್ ಹಾಗೂ ಇತರರು ಉಪಸ್ಥಿತರಿದ್ದರು.