ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು, ದಮ್ಮಾಮ್ ವಲಯ ಅಧೀನದ ಯೂತ್ ವಿಂಗ್ ಜುಬೈಲ್ ಡಿವಿಷನ್ ಮಹಾಸಭೆಯು ದಿನಾಂಕ 6, ಫೆಬ್ರುವರಿ 2026 ಶುಕ್ರವಾರ ಜುಮ್ಅ ನಮಾಝಿನ ಬಳಿಕ ಅಧ್ಯಕ್ಷ ಸಾಮಿತ್ ಪಡುಬಿದ್ರಿ ರವರ ಅಧ್ಯಕ್ಷತೆಯಲ್ಲಿ ಜುಬೈಲ್ನಲ್ಲಿ ಜರಗಿತು.
ರಿಯಾಝ್ ಪಡುಬಿದ್ರಿ ವಾರ್ಷಿಕ ವರದಿ ಹಾಗೂ ನಿಶಾಯಿಲ್ ಕೂಳೂರು ಪ್ರವರ್ತನಾ ವರದಿ ಮಂಡಿಸಿದರು.


ಡಿಕೆಯಸ್ಸಿ ದಮ್ಮಾಮ್ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ನೇತೃತ್ವದಲ್ಲಿ 2026-27 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರು: ಸಮಿತ್ ಪಡುಬಿದ್ರಿ ಪುನರಾಯ್ಕೆಗೊಂಡರು
ಪ್ರಧಾನ ಕಾರ್ಯದರ್ಶಿ: ಸಫೀರ್ ಗೂಡಿನ ಬಳಿ,
ಹಣಕಾಸು ಕಾರ್ಯದರ್ಶಿ: ಸಫ್ವಾನ್ ಕಣ್ಣಂಗಾರ್
ಕ್ರಿಯೇಟಿವ್ ಕಾರ್ಯದರ್ಶಿ: ರಿಯಾಝ್ ಪಡುಬಿದ್ರಿ,
ಟ್ರೈನಿಂಗ್ ಕಾರ್ಯದರ್ಶಿ: ಸಾಯಿಕ್ ಪಡುಬಿದ್ರಿ,
PR ಕಾರ್ಯದರ್ಶಿ: ನಿಶಾಯಿಲ್ ಕೂಳೂರು,
ಕಲ್ಚರಲ್ ಕಾರ್ಯದರ್ಶಿ: ಸವಾದ್ ಪಕ್ಷಿಕೆರೆ,
ವಿಸ್ಡಮ್ ಕಾರ್ಯದರ್ಶಿ: ಜವಾದ್ ಉಳ್ಳಾಲ,
ವೆಲ್ಫೇರ್ ಕಾರ್ಯದರ್ಶಿ: ಶಾಹಿಫ್ ಕೃಷ್ಣಾಪುರ,
ಆರ್ಗನೈಸರ್: ಅಝರ್ ಪಡುಬಿದ್ರಿ, ಸುಹೈಲ್ ಪಕ್ಷಿಕೆರೆ ಇವರನ್ನು ಆಯ್ಕೆ ಮಾಡಲಾಯಿತು.
ಡಿವಿಷನ್ ಸಮಿತಿ ಅಧೀನದಲ್ಲಿ ಹೂಗಳು ಅರಳಲಿದೆ ಎಂಬ ಶೀರ್ಷಿಕೆಯೊಂದಿಗೆ ನೂತನ 5 ಶಾಖೆಗಳನ್ನು ಘೋಷಿಸಲಾಯಿತು
ಡಿಕೆಯಸ್ಸಿ ಕೇಂದ್ರ ಸಮಿತಿ ದಾಯಿ ಅಬ್ದುರ್ರಶೀದ್ ಸಅದಿ ತರಬೇತಿ ನೀಡಿ ಸಭೆಯನ್ನು ಉದ್ಘಾಟಿಸಿದರು.



ಡಿಕೆಯಸ್ಸಿ ದಮ್ಮಾಮ್ ವಲಯ ಆರ್ಗನೈಝರ್ ಝುಬೈರ್ ಸಖಾಫಿ ದುಆ ಗೈದರು.
ಫಾಮಿದ್ ಹನೀಫಿ ನಂದಾವರ ಖಿರಾಅತ್ ಪಠಿಸಿದರು. ಸಭೆಯಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ತಂಙಳ್ ಉಚ್ಚಿಲ, ಇಸ್ಮಾಯಿಲ್ ಮುಸ್ಲಿಯಾರ್, ಅಬ್ದುಲ್ ಮಜೀದ್ ಕಣ್ಣಂಗಾರ್, ಮುಸ್ತಫಾ ಮೈನ,ಮುಶ್ತಾಖ್ ಹೊಸನಗರ, ಮುಹಮ್ಮದ್ ಕಮರಡಿ,ಅಶ್ರಫ್ ನಾಳ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಫ್ವಾನ್ ಕಣ್ಣಂಗಾರ್ ಸ್ವಾಗತಿಸಿ, ಅಝರ್ ಪಡುಬಿದ್ರಿ ಧನ್ಯವಾದಗೈದರು.






