ರಿಯಾದ್ : 1995 ರಲ್ಲಿ ಸ್ಥಾಪಿತ ಗೊಂಡ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಗೆ ಇದೀಗ 30 ರ ಹರೆಯ.
ಡಿಕೆಯಸ್ಸಿಯ ಅಧೀನದಲ್ಲಿ ಉಡುಪಿ ಜಿಲ್ಲೆಯ ಮೂಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಮರ್ಕಝ್ ತಅಲೀಮಿಲ್ ಇಹ್ಸಾನ್ ನಲ್ಲಿ ಸುಮಾರು ಎರಡು ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳು ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಎಲ್ ಕೆಜಿ ಯಿಂದ ಡಿಗ್ರಿಯವರೆಗೆ ಲೌಕಿಕ ವಿಧ್ಯಾಭ್ಯಾಸ ಪಡೆದು ಪದವೀಧರರಾಗಿ ಹೊರ ಹೊಮ್ಮುತ್ತಿದ್ದಾರೆ ಅದಲ್ಲದೆ ಧಾರ್ಮಿಕ ವಿಧ್ಯಾಭ್ಯಾಸ ಪಡೆದು ಇಹ್ಸಾನಿ ಬಿರುದು ಪಡೆದು ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ.



ಡಿಕೆಯಸ್ಸಿ ವಿಷನ್ 30 ಪ್ರಯುಕ್ತ ರಿಯಾದ್ ನಲ್ಲಿ ಡಿಸೆಂಬರ್ 18-2025 ಗುರುವಾರ ಮುಸ್ಸಂಜೆ ರೆಸಾರ್ಟ್ ನಲ್ಲಿ ಡಿ.ಕೆ.ಎಸ್ಸಿ ಫ್ಯಾಮಿಲಿ ಮುಲಾಖಾತ್ 2025 ಬಹಳ ವಿಜೃಂಭಣೆಯಿಂದ ಜರಗಿತು.
ಫ್ಯಾಮಿಲಿ ಮುಲಾಖಾತ್ ಚೆಯರ್ಮ್ಯಾನ್ ಅಬ್ದುಲ್ ಅಝೀಝ್ ಬಜ್ಪೆಯವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾಕಾರ್ಯಕ್ರಮದಲ್ಲಿ ಡಿಕೆಯಸ್ಸಿ ಕೇಂದ್ರ ಸಮಿತಿ ದಾಯಿ ಅಬ್ದುರ್ರಶೀದ್ ಸಅದಿ ದುಆ ದ ಮೂಲಕ ಚಾಲನೆ ನೀಡಿದರು.
ಜನಾಬ್ ಇಸ್ಮಾಯೀಲ್ ಕಾಟಿಪಳ್ಳ ಪವಿತ್ರ ಖುರ್ ಆನ್ ನ ಸೂಕ್ತವನ್ನು ಪಠಿಸಿ ಅದರ ಅರ್ಥವನ್ನು ಕನ್ನಡಕ್ಕೆ ಅನುವಾದಿಸಿದರು.
ರಿಯಾದ್ ಝೋನ್ ಪ್ರಧಾನ ಕಾರ್ಯದರ್ಶಿ ಹುಝೈಫ ಪೆರಾಜೆ ಸಮಾರಂಭಕ್ಕೆ ಆಗಮಿಸಿದ್ದ ಗಣ್ಯ ಅತಿಥಿಗಳನ್ನು ಹಾಗೂ ಸಭಿಕರನ್ನು ಸ್ವಾಗತಿಸಿದರು.
ಡಿಕೆಯಸ್ಸಿ ಕೇಂದ್ರ ಸಮಿತಿ ಹಣಕಾಸು ಕಾರ್ಯದರ್ಶಿ ದಾವೂದ್ ಕಜಮಾರ್ ಅಲ್ಲಾಹುವಿನ ದಿವ್ಯ ನಾಮದಿಂದ ಸಮಾರಂಭವನ್ನು ಉದ್ಘಾಟಿಸಿದರು.



ಡಿಕೆಯಸ್ಸಿ ರಿಯಾದ್ ವಲಯ ಅಧ್ಯಕ್ಷ ಅಬ್ದುಲ್ ಅಝೀಝ್ ಕಾಟಿಪಳ್ಳ,ಫ್ಯಾಮಿಲಿ ಮುಲಾಖಾತ್ ಕನ್ವೀನರ್ ನಝೀರ್ ಹಾಜಿ ಕಾಶಿಪಟ್ಣ,ಝೋನ್ ಉಪಾಧ್ಯಕ್ಷ ಅಬ್ದುಲ್ ಖಾದರ್ ಕಣ್ಣಂಗಾರ್ ಬುರೈದ,ಡಿಕೆಯಸ್ಸಿ ಕೇಂದ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು,ವೆನ್ಝ್ ಹೋಮ್ಸ್ ಮಾಲೀಕ ಅಬ್ದುಲ್ ಹಮೀದ್ ವೆನ್ಜ್ ,ದಮ್ಮಾಂ ವಲಯಾಧ್ಯಕ್ಷ ಅಬ್ದುಲ್ ಹಮೀದ್ ಕಾಪು, ರಿಯಾದ್ ವಲಯ ಉಸ್ತುವಾರಿ ಸುಲೈಮಾನ್ ಮಿಲನ್ ಸೂರಿಂಜೆ, ಡಿಕೆಯಸ್ಸಿ ಸ್ಥಾಪಕ ಸದಸ್ಯ ಅಬ್ದುಲ್ ಗಫೂರ್ ಸಜಿಪ, ಮುಲಾಕಾತ್ ಹಣಕಾಸು ಕಾರ್ಯದರ್ಶಿ ದಾವೂದ್ ಕಂದಕ್, ಕೇಂದ್ರ ಸಮಿತಿ ಆರ್ಗನೈಝಿಂಗ್ ಸೆಕ್ರಟರಿ ಜಮಾಲ್ ಸ್ವಾಲಿಹ್ ಕಣ್ಣಂಗಾರ್, ರಿಯಾದ್ ವಲಯ ಹಣಕಾಸು ಕಾರ್ಯದರ್ಶಿ ಇಸ್ಮಾಯಿಲ್ ಕಣ್ಣಂಗಾರ್, ಕೇಂದ್ರ ಸಮಿತಿ ಸದಸ್ಯ ಸಯ್ಯದ್ ಬಾವ ಬಜ್ಪೆ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.
ಫ್ಯಾಮಿಲಿ ಮುಲಾಖಾತ್ ಚೆಯರ್ಮ್ಯಾನ್ ಅಬ್ದುಲ್ ಅಝೀಝ್ ಬಜ್ಪೆರವರು ಡಿಕೆಯಸ್ಸಿ ಮತ್ತು ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಇದರ ಈವರೆಗಿನ ಸಾಧನೆ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಪಿಪಿಟಿ ಮೂಲಕ ಸವಿಸ್ತಾರವಾಗಿ ವಿವರಿಸಿದರು.



ಝೋನ್ ಉಪಾಧ್ಯಕ್ಷ ಅಬ್ದುಲ್ ಹಮೀದ್ ಉಸ್ತಾದ್ ಅಲ್ ಖರ್ಜ್,ಉಪಾಧ್ಯಕ್ಷ ಯೂಸುಫ್ ಹಾಜಿ ಕಳಂಜಿಬೈಲ್, ಸಲಹೆಗಾರರಾದ ಮುಸ್ಥಫ ಸಅದಿ ಸೂರಿಕುಮೇರು, ರಿಯಾದ್ ವಲಯ ನೂತನ ಆರ್ಗನೈಝರ್ ಉಸ್ತಾದ್ ಆಸಿಫ್ ಅಶ್ರಫಿ,ಅಬ್ದುಲ್ಲ ಮದನಿ, ಹಾರಿಸ್ ಸಖಾಫಿ, ಇಬ್ರಾಹೀಂ ಬಜ್ಪೆ, ಸೈಫುಲ್ಲಾ ಕಾಟಿಪಳ್ಳ, ಶರೀಫ್ ತೋಕೂರು, ಅಬ್ದುಲ್ ಮಜೀದ್ ವಿಟ್ಲ,ನೌಫಲ್ ಮನಾಲ್, ಮುನೀರ್ ಕೃಷ್ಣಾಪುರ, ಜುನೈದ್ ಮೂಡುತೋಟ,ವಿವಿಧ ವಿಭಾಗಳಲ್ಲಿ ಉತ್ತಮವಾಗಿ ನೇತೃತ್ವ ನೀಡಿದರು.
ಕರ್ನಾಟಕ ಕಲ್ಚರಲ್ ಫೌಂಡೇಶನ್ ವತಿಯಿಂದ ಜರುಗಿದ ದಫ್ ಕಾರ್ಯಕ್ರಮವು ಮುಲಾಕಾತ್ ಸಮಾರಂಭಕ್ಕೆ ಮೆರುಗು ನೀಡಿತ್ತು.
ಡಿಕೆಯೆಸ್ಸಿ ಇದರ ವತಿಯಿಂದ ನಡೆದ ಲಕ್ಕಿ ಡ್ರಾದಲ್ಲಿ ಬಂಪರ್ ಬಹುಮಾನವನ್ನು ಜನಾಬ್ ಮುಹಮ್ಮದ್ ಮಂಗಳೂರು ತನ್ನದಾಗಿಸಿದರು.
ವೆನ್ಝ್ ಹೋಮ್ಸ್ ಪ್ರಾಯೋಜಕತ್ವದ ಡ್ರಾದಲ್ಲಿ ಅಬ್ದುಸ್ಸಲಾಂ ಎಣ್ಮೂರ್ ರವರು ಮೂರು ದಿವಸ ದುಬೈ ವಾಸ್ತವ್ಯವಿರುವ ರಿಟರ್ನ್ ಟಿಕೆಟ್ ವಿಜೇತರಾದರು.
ಹಲವಾರು ಸಂಘ ಸಂಸ್ಥೆಗಳ ನೇತಾರರು,ಹಾಗು ಡಿಕೆಯಸ್ಸಿ ರಿಯಾದ್ ವಲಯದ ಅಧೀನಕ್ಕೊಳಪಟ್ಟ ಬತ್ತ, ಬುರೈದ, ಸನಯ್ಯಾ, ಶಿಫಾ, ಅಲ್ ಖರ್ಜ್, ಮಲಾಝ್, ದಲ್ಲಾ, ಹಾಯಿಲ್ ಘಟಕಗಳ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಹಾಜರಿದ್ದರು.
ಪುರುಷರಿಗೆ ಹಾಗೂ ಮಕ್ಕಳ ವಿವಿಧ ಆಟೋಟ ಸ್ಪರ್ಧೆಗಳನ್ನು ಹನೀಫ್ ಎನ್.ಎಸ್ ಇವರ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ನಡೆಸಲಾಯಿತು.
ನೆರೆದ ಸಭಿಕರಿಗೆ ಆಕರ್ಷಕ ಹಾಗೂ ವಿನೂತನ ಶೈಲಿಯ ಡಿಜಿಟಲ್ ಕ್ವಿಜ್ ಸ್ಪರ್ಧೆಯನ್ನು ಜನಾಬ್ ಅಬ್ದುಲ್ ಸಲಾಂ ಎನ್ಮೂರ್ ಇವರು ನಡೆಸಿದರು.
ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಖಿರಾಅತ್,ಹಾಗೂ ಇನ್ನಿತರ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಅತ್ಯಾಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.
ದುರತ್ ಲಮಾರ್ ಕ್ಲಿನಿಕ್ ವತಿಯಿಂದ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿತ್ತು.
ಜೂಮ್ ಪ್ಲಸ್,ವ್ಯಾಲ್ಯೂ ಸ್ಟಾರ್ ಹಾಗು ಪ್ರಾನ್ ಕಂಪೆನಿ ವತಿಯಿಂದ ಆಕರ್ಷಕ ಗಿಫ್ಟ್ ಗಳನ್ನು ವಿತರಿಸಲಾಯಿತು.
ದಾವೂದ್ ಸಅದಿ ಉರುವಾಲುಪದವು ಹಾಗೂ ಹುಜೈಫಾ ಪೆರಾಜೆ ನೇತೃತ್ವದಲ್ಲಿ ಸ್ವಯಂ ಸೇವಕರು ಉತ್ತಮ ಸೇವೆಗೈದು ಫ್ಯಾಮಿಲಿ ಮುಲಾಖಾತ್ ಯಶಸ್ವಿಗೆ ಕಾರಣಕರ್ತರಾದರು.
ಅವಿಭಾಜಿತ ದಕ್ಷಿಣ ಕನ್ನಡದ ಸಾಂಪ್ರದಾಯಿಕ ತಿಂಡಿತಿನಿಸುಗಳಾದ ಚರ್ ಮುರಿ, ಜಿಲೇಬಿ,ಬೇಯಿಸಿದ ಮೊಟ್ಟೆ, ಚಿಕನ್ ಸೂಪ್,ಪಾಯಸ,ಮಸಾಲಾ ಚಾ,ಕಾಫಿ, ಜ್ಯೂಸ್, ಗಳಿಂದ ಕೂಡಿದ ಉತ್ತಮ ಭೋಜನ ಕೂಟವು ಚಳಿಯಿಂದ ತತ್ತರಿಸಿದ ಅತಿಥಿಗಳಗೆ ಉಣಬಡಿಸಲಾಯಿತು.
ಡಿಕೆಯೆಸ್ಸಿ ರಿಯಾದ್ ವಲಯ ಸಂವಹನ ಕಾರ್ಯದರ್ಶಿ ಜನಾಬ್ ಅಬ್ದುಲ್ ರಹ್ಮಾನ್ ಸುಲೈಮಾನ್ ಉಚ್ಚಿಲ ಕಾರ್ಯ ಕ್ರಮ ನಿರೂಪಿಸಿದರು.
SPORTS:
Tug of war winner- five building batha
Runner- Al Bedeiwi Shifa
Push up winner- Abdur Raheem
Push up Runner – Amraz
Digital Quiz Winners:
1. Muhammad Aiman
Runner: Mujtaba







