ಕಾರ್ಕಳ: ಕರಾವಳಿ ಕರ್ನಾಟಕದಲ್ಲಿ ಕೋಮು ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ‘ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಧ್ಯೇಯವಾಕ್ಯದೊಂದಿಗೆ ಎಲ್ಲ ಜಾತಿ ಮತಗಳ ಜನರನ್ನು ಸೇರಿಸಿ ನಡೆಸುವ ‘ಸೌಹಾರ್ದ ಸಂಚಾರ’ಕ್ಕೆ ಇಂದು ಬೆಳಗ್ಗೆ 9ಗಂಟೆಗೆ ಕುಂದಾಪುರದಲ್ಲಿ ಚಾಲನೆ ನೀಡಿದೆ.
ಕಾರ್ಕಳ ತಲುಪಿದ ‘ಸೌಹಾರ್ದ ಸಂಚಾರ’ ದಲ್ಲಿ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೂಡುಬಿದಿರೆ ಜೈನ ಬಸದಿ, ಅತ್ತೂರು ರೆವರೆಂಡ್ ಫಾದರ್ ಅಲ್ವಿನ್ ಡಿಸೋಜ, ಕಾರ್ಕಳ ವೆಂಕಟರಮಣ ದೇವಾಲಯದ ಉಲ್ಲಾಸ ಶೆಣೈ ಮಾತನಾಡಿದರು.
MSM ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಂದೇಶ ಭಾಷಣ ಮಾಡಿದರು.
SYS ರಾಜ್ಯಾಧ್ಯಕ್ಷ ಬಶೀರ್ ಸ’ಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು.
ಪ್ರ.ಕಾರ್ಯದರ್ಶಿ: ಡಾ! ಕೆ.ಎಂ.ಸಿದ್ದೀಖ್ ಮೋಂಟುಗೋಳಿ ಕಾರ್ಯಕ್ರಮ ಉದ್ಘಾಟಿಸಿದರು.



ಎಸ್ ವೈ ಎಸ್ ರಾಜ್ಯ ಉಪಾಧ್ಯಕ್ಷ
ಸಯ್ಯಿದ್ ಇಲ್ಯಾಸ್ ತಂಙಳ್ ಎಮ್ಮೆಮಾಡು, ಸಯ್ಯಿದ್ ಶಾಫೀ ನಈಮೀ ತಂಙಳ್ ಮಾರ್ನಹಳ್ಳಿ, ಸಯ್ಯಿದ್ ಹಾಮಿಮ್ ತಂಙಳ್ ಚಿಕ್ಕಮಂಗಳೂರು, ಇಬ್ರಾಹಿಂ ಸಖಾಫಿ ಪಯೋಟ, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್, ಇಸ್ಹಾಖ್ ಝುಹ್ರಿ ಕಾನಕೆರೆ, ಮಹ್ಬೂಬ್ ಸಖಾಫಿ ಕಿನ್ಯ, ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್, ಅಶ್ರಪ್ ಎಮ್ಮೆಮಾಡು, ಅತ್ತಾವುಳ್ಳ ಮೈಸೂರು, ಇಬ್ರಾಹಿಂ ಮೂಡಿಗೆರೆ, ಸಲೀಂ ಕನ್ಯಾಡಿ, ಕಲಂದರ್ ಕಕ್ಕೆಪದವು, ಯಾಕೂಬ್ ಸಅದಿ ನಾವೂರು, ನವಾಝ್ ಸಖಾಫಿ ಅಡ್ಯಾರ್, ಫಾರೂಕ್ ಶೇಡಿಗುರಿ, ಕೋಶಾಧಿಕಾರಿ ಮನ್ಸೂರ್ ಶಿವಮೊಗ್ಗ,ಸ್ವಾಗತ ಸಮಿತಿ ಚೇರ್ಮನ್ ನಿಟ್ಟೆ ಮುಹ್ಯಿದ್ದೀನ್ ಹಾಜಿ, ನಾಯಕಾದ ಸುಬೋಧ್, ದ.ಸಂ.ಸ ಅಧ್ಯಕ್ಷ ಅಣ್ಣಪ್ಪ, ಕ.ರ.ವೇ ಅಧ್ಯಕ್ಷ ರಾದ ಹನೀಫ್, ಇಮ್ರಾನ್, ಕೌನ್ಸಿಲರ್ ಜನಾಬ್ ಅಶ್ಫಾಖ್ , ಶರೀಫ್ ಬಂಗ್ಲೆಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
N.C.ರಹೀಂ ಕಾರ್ಯಕ್ರಮ ನಿರೂಪಿಸಿದರು, ಹುಸೈನ್ ಸ’ಅದಿ ಹೊಸ್ಮಾರ್ ಸ್ವಾಗತಿಸಿರು, ಕಿಲ್ಲೂರು ಶರೀಫ್ ಸ’ಅದಿ ಧನ್ಯವಾದವಿತ್ತರು.







