ಮುಡಿಪು :ಎಸ್.ವೈ.ಎಸ್ ರಾಜ್ಯ ಸಮಿತಿಯು ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಘೋಷಣೆಯೊಂದಿಗೆ ಜುಲೈ 14,15,16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ‘ಸೌಹಾರ್ದ ಸಂಚಾರ’ ನಡೆಯಲಿದೆ.
ಇದರ ಪ್ರಚಾರಾರ್ಥ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲೆಯು ಜಿಲ್ಲಾ ವ್ಯಾಪ್ತಿಯ 8 ಝೋನ್ ಗಳಿಗೆ ಸ್ನೇಹ ಸಂಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಅದರ ಭಾಗವಾಗಿ ಮುಡಿಪು ಝೋನ್ ಸ್ನೇಹ ಸಂಚಾರ ಕಾರ್ಯಕ್ರಮವು ಮುಡಿಪು ಝೋನ್ ಅಧ್ಯಕ್ಷರಾದ ಉಸ್ಮಾನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಎಜ್ಯುಪಾರ್ಕ್ ಮುಡಿಪುವಿನಲ್ಲಿ ನಡೆಯಿತು.


ಎಸ್.ವೈ.ಎಸ್ ದ. ಕ ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ನೇಹ ಸಂಚಾರ ಕಾರ್ಯಕ್ರಮದ ರೂಪುರೇಶೆಯನ್ನು ವಿವರಿಸಿ ಮಾತನಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರಾದ ಮೆಹಬೂಬ್ ಸಖಾಫಿ ಕಿನ್ಯ,ಕೋಶಾಧಿಕಾರಿ ರಝಾಕ್ ಭಾರತ್,ಜಿಲ್ಲಾ ಉಪಾಧ್ಯಕ್ಷ ನವಾಝ್ ಸಖಾಫಿಅಡ್ಯಾರ್,ಜಿಲ್ಲಾ ಕಾರ್ಯದರ್ಶಿ ಖಾಲಿದ್ ಹಾಜಿ ಭಟ್ಕಳ, ಜಿಲ್ಲಾ ನಾಯಕರಾದ *ಇಬ್ರಾಹಿಂ ಅಹ್ಸನಿ, ಶರೀಫ್ ಮುಡಿಪು, ಉಮರ್ ಮದನಿ ಬೋಳಿಯಾರ್, KMJ ಮುಡಿಪು ಝೋನ್ ಜನರಲ್ ಸೆಕ್ರೆಟರಿ ಸಾಮಣಿಗೆ ಮದನಿ ಉಸ್ತಾದ್ ಹಾಗೂ SჄS ಝೋನ್ ನಾಯಕರು,ಕೆ.ಎಂ ಜೆ ನಾಯಕರು ಉಪಸ್ಥಿತರಿದ್ದರು..
ಮುಡಿಪು ಝೋನ್ ಪ್ರಧಾನ ಕಾರ್ಯದರ್ಶಿ ಅಸ್ಲಂ ಸಂಪಿಲ ಸ್ವಾಗತಿಸಿ ಝೋನ್ ಐಟಿ & ಮೀಡಿಯಾ ಸೆಕ್ರೆಟರಿ ಇಲ್ಯಾಸ್ ಪೊಟ್ಟೋಳಿಕೆ ವಂದಿಸಿದರು.







