janadhvani

Kannada Online News Paper

‘ಅನಿ’ ಸಂಸ್ಥೆಗೆ 6ರ ಸಂಭ್ರಮ: ಲತೀಫ್ ಗುರುಪುರ ಅವರಿಗೆ ಸ್ನೇಹಿತರಿಂದ ಸನ್ಮಾನ

ಮಂಗಳೂರು: ಅನಿ ಸಂಸ್ಥೆಯ ಸ್ಥಾಪಕ, ಸಮಾಜ ಸೇವಕ ಲತೀಫ್ ಗುರುಪುರ ಅವರಿಗೆ ಸಮಾಜದ ಗಣ್ಯರಿಂದ ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು.

ಅನಿ ಟ್ರೇಡಿಂಗ್ ಕಂಪೆನಿ ಆರಂಭಿಸಿ ಆರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅವರ ಕಚೇರಿಯಲ್ಲಿ ವಾರ್ಷಿಕ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಬಡ ವಿದ್ಯಾರ್ಥಿಗಳಿಗೆ ಸಹಾಯ ಧನ ನೀಡಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ವಾಗ್ಮಿ ಅನೀಸ್ ಕೌಸರಿ ನೆರವೇರಿಸಿ ಸಯ್ಯಿದ್ ಬಾತಿಷಾ ತಂಙಳ್ ದುಆ ನೆರವೇರಿಸಿದರು.
ತರಬೇತುದಾರರಾದ ರಫೀಖ್ ಮಾಸ್ಟರ್ ಮುಖ್ಯ ಭಾಷಣಗೖದರು. ಇಕ್ಬಾಲ್ ಬಾಳಿಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂಧರ್ಭದಲ್ಲಿ ಬಶೀರ್ ಪುತ್ತೂರು ಆಸಿಫ್ ಆದರ್ಶ್, ಶಾಫಿ ಮುಲಾರ್ ಪಟ್ನ, ಅಶ್ರಫ್ ಚಾಯ್ಸ್ ಗೋಲ್ಡ್, ಜಲೀಲ್ ಮಂಗಳೂರು ಇಸ್ಮಾಯಿಲ್ ಯಮಾನಿ ಸೇರಿದಂತೆ ಹಲವು ಅತಿಥಿಗಳು ಉಪಸ್ಥಿತರಿದ್ದರು.
ಇವರ ಸೇವಾ ತಳಚಟುವಟಿಕೆಯನ್ನು ಗಮನಿಸಿ ಅತಿಥಿಗಳು ಲತೀಫ್ ಗುರುಪುರರವರನ್ನು ಸನ್ಮಾನಿಸಿ ಶುಭ ಹಾರೖಸಿದರು.