janadhvani

Kannada Online News Paper

ಕೋಮು ದ್ವೇಷಕ್ಕೆ ಬಲಿಯಾದ ಅಬ್ದುಲ್ ರಹೀಂ ಮನೆಗೆ ಸಮಸ್ತ ಉಲಮಾ ನಾಯಕರು ಭೇಟಿ

ಬಂಟ್ವಾಳ: ಇತ್ತೀಚೆಗೆ ಬಜ್ಪೆ ಚಲೋ ಎಂಬ ಕಾರ್ಯಕ್ರಮದಲ್ಲಿ ನಡೆದ ಪ್ರಚೋದನಕಾರಿ ಭಾಷಣದಿಂದ ಪ್ರಚೋದಿತರಾದ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ರಹೀಂ ಕೊಳತ್ತಮಜಲು ಅವರ ಮನೆಗೆ ಸಮಸ್ತ ಉಲಮಾ ನಾಯಕರು ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದರು.

ನಿಯೋಗದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರದ ಪ್ರಧಾನ ಕಾರ್ಯದರ್ಶಿ ಬಿ.ಕೆ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ, ಕಾರ್ಯಾಧ್ಯಕ್ಷರಾದ ಕೆ.ಎಂ ಉಸ್ಮಾನುಲ್ ಫೈಝಿ ತೋಡಾರು, ಯು.ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಕೆ.ಪಿ.ಎಂ ಶರೀಫ್ ಫೈಝಿ ಕಡಬ, ಅಹ್ಮದ್ ದಾರಿಮಿ ಕಂಬಳಬೆಟ್ಟು, ಕೆ.ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಶರೀಫ್ ದಾರಿಮಿ ಪೊಮ್ಮಲೆ ಮುಂತಾದ ಉಲಮಾಗಳು ಉಪಸ್ಥಿತರಿದ್ದರು.