ಅಡ್ಡೂರು ಪೊಳಲಿ ಸಮೀಪದ ಕೊಳ್ತಮಜಲು ಎಂಬಲ್ಲಿ ಅಮಾಯಕ ಯುವಕನನ್ನು ಕೊಲೆ ಮಾಡಿರುವುದನ್ನು ಎಸ್ವೈಎಸ್ ದಕ ವೆಸ್ಟ್ ಘಟಕವು ತೀವ್ರವಾಗಿ ಖಂಡಿಸಿದೆ.
ಇತ್ತೀಚೆಗೆ ದಕ ಜಿಲ್ಲೆಯಲ್ಲಿ ನಡೆದ ಎರಡು ಹತ್ಯೆಗಳ ನಂತರ ಕೋಮುವಾದಿ ಶಕ್ತಿಗಳು ಬಹಿರಂಗವಾಗಿ ಪ್ರತೀಕಾರದ ಹೇಳಿಕೆ ಕೊಡುತ್ತಿರುವಾಗಲೂ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವುದೇ ಸರಣಿ ಕೊಲೆಗಳು ಮುಂದುವರಿಯಲು ಕಾರಣವಾಗಿದೆ.
ವರ್ಷಗಳ ಹಿಂದೆ ನಡೆದ ಯಾವುದೋ ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್ ಮಸೂದ್ ಎಂಬವರನ್ನು ಕೊಂದು ಪ್ರತೀಕಾರ ತೀರಿಸಿದ್ದೇವೆ ಎಂಬರ್ಥದಲ್ಲಿ ಮಂಗಳೂರಿನ ದ್ವೇಷ ಭಾಷಣಕಾರನೋರ್ವ ಬಹಿರಂಗ ಹೇಳಿಕೆ ಕೊಟ್ಟಿದ್ದ. ಅಂತಹ ಪುಂಡರ ವಿರುದ್ಧ ಈ ತನಕ ಕ್ರಮ ಜರಗಿಸಿಲ್ಲ. ಸರಕಾರ ಹಾಗೂ ಪೊಲಿಸ್ ಇಲಾಖೆಯ ಇಂತಹ ಮೃದುಧೋರಣೆಗಳಿಂದಾಗಿಯೇ ಅಮಾಯಕರು ಬಲಿಯಾಗುತ್ತಿದ್ದಾರೆ .
ಅಪರಾಧ ಕೃತ್ಯಗಳಿಗೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳುವ ಬದಲು, ಪ್ರತೀಕಾರ ತೀರಿಸುತ್ತೇವೆ ಎಂದು ಹೇಳಿಕೆ ಕೊಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಅವರನ್ನು ರಾಜಾರೋಷಾಗಿ ತಿರುಗಾಡಲು ಬಿಟ್ಟಿರುವುದು
ಅಪಾಯಕಾರಿ ಬೆಳವಣಿಗೆಯಾಗಿದೆ.ಅಂತಹವರನ್ನು ಜೈಲಿಗಟ್ಟಿದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಿಸಲು ಸಾಧ್ಯ .ಎಂದು ಎಸ್ವೈಎಸ್ ದ.ಕ ವೆಸ್ಟ್ ಜಿಲ್ಲೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.







