ಕೊಪ್ಪಳ :ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸೂಚಿಸಿದಂತೆ ಏಪ್ರಿಲ್ 30ರಂದು ಬುಧವಾರ ರಾತ್ರಿ 9 ಗಂಟೆಯಿಂದ”15 ನಿಮಿಷಗಳು ಮೌನ ನಿಲುವು”ದೀಪಗಳನ್ನು ಸ್ವಿಚ್ ಆಫ್ ಮಾಡುವ ಮೂಲಕ ವಕ್ಫ್ ತಿದ್ದುಪಡಿ ಕಾಯ್ದೆ 2025 ರ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಯಲಿದೆ ಎಂದು ಸಂಘಟನೆಗಳು ಪ್ರಕಟನೆಯಲ್ಲಿ ತಿಳಿಸಿವೆ.
ಪ್ರತಿಯೊಬ್ಬ ನ್ಯಾಯ ಪ್ರಿಯ ಸ್ನೇಹಿತರು ತಮ್ಮ ತಮ್ಮ ಮನೆ, ಅಂಗಡಿ ಸೇರಿದಂತೆ ವಿವಿಧ ಉದ್ಯಮಗಳನ್ನು ಹೊಂದಿದವರು ಬುಧವಾರ 30ನೇ ಏಪ್ರಿಲ್ 2025 ರಂದು ರಾತ್ರಿ 9:00 ರಿಂದ 9:15 ರವರೆಗೆ ವಿದ್ಯುತ್ ದೀಪದ ಸ್ವಿಚ್ ಆಫ್ ಮಾಡಿ ನ್ಯಾಯಯುತ ಒಂದು ಧ್ವನಿ ಎಂಬ ಹೋರಾಟಕ್ಕೆ ಬೆಂಬಲಿಸುವಂತೆ ಕರ್ನಾಟಕ ಮುಸ್ಲಿಮ್ ಜಮಾಅತ್ ಮುಖಂಡ ಮೌಲಾನಾ ಖಾರಿ ಮೊಹಮ್ಮದ್ ಅಬುಲ್ ಹಸನ್ ಖಾಝಿ,ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಮಾಜಿ ಉಪಾಧ್ಯಕ್ಷ ಗೌಸ್ ನೀಲಿ, ಮೊಹಮ್ಮದ್ ಕಿರ್ಮಾನಿ ಖಾಝಿ ಮುಂತಾದವರು ಕೋರಿದ್ದಾರೆ.







