janadhvani

Kannada Online News Paper

ಅಲ್ ಖಸೀಂ : ರಬೀಅ್-23 ಝೋನ್ ಮಟ್ಟದಲ್ಲಿ ಪ್ರೌಡೋಜ್ವಲ ಚಾಲನೆ

ಕರ್ನಾಟಕ ಕಲ್ಚರಲ್ ಫೌಂಡೇಶನ್ KCF “ಜಗತ್ತಿಗೆ ಕರುಣೆಯ ಪ್ರವಾದಿ (ﷺ)” ಎಂಬ ಪ್ರಮೇಯದಲ್ಲಿ ಸೌದಿ ಅರೇಬಿಯಾದಾದ್ಯಂತ ನಡೆಸುತ್ತಿರುವ ರಬೀಅ್-23 ಕಾರ್ಯ ಕ್ರಮವು ಕೆ.ಸಿ.ಎಫ್ ಅಲ್ ಖಸೀಂ ಝೋನಿನ ದವಾದ್ಮಿ ಸೆಕ್ಟರಿನ ರಫಾಯ ಯುನಿಟ್ ನಲ್ಲಿ ಚಾಲನೆ ನೀಡಲಾಯಿತು.

ಪ್ರವಾದಿ ಪ್ರಕೀರ್ತನೆಗಳ ನಂತರ ನಡೆದ ಸಭಾ ಕಾರ್ಯಕ್ರಮವು ಸೆಕ್ಟರ್ ಅಧ್ಯಕ್ಷರಾದ ಉಮರ್ ಕರ್ನೂರು ರವರ ಅಧ್ಯಕ್ಷತೆಯಲ್ಲಿ ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆ ಕಾರ್ಯದರ್ಶಿ ಯಾಕೂಬ್ ಸಖಾಫಿ ಉಸ್ತಾದರು ಉದ್ಘಾಟಿಸಿದರು ಕಮಾಲ್ ಕೆ.ಸಿ.ರೋಡ್ ಕಿರಾಅತ್ ಪಠಿಸಿದರು

ಮುಹಮ್ಮದ್ ನಝೀರ್ ದಾರಿಮಿ ಅರ್ಥ ಪೂರ್ಣವಾದ ಮುಖ್ಯ ಪ್ರಬಾಷಣ ನಡೆಸಿದರು
ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಇಹ್ಸಾನ್ ಇಲಾಖೆ ಕಾರ್ಯದರ್ಶಿ ಕಾದರ್ ಕಣ್ಣಂಗಾರ್ ಹಾಗೂ ಖಸೀಂ ಝೋನ್ ಕಾರ್ಯದರ್ಶಿ ಬಶೀರ್ ಕನ್ಯಾನ ಆಶಂಸ ಮಾತುಗಳನ್ನಾಡಿದರು

KCF ಅಂತರ್ರಾಷ್ಟ್ರೀಯ ಸಮಿತಿ ನೀಡಿದ ಯುನಿಟ್ ರಿಜಿಸ್ಟ್ರೇಶನ್ ಸರ್ಟ್ ಫಿಕೆಟ್ ಯುನಿಟ್ ಗಳಿಗೆ ವಿತರಿಸಲಾಯಿತು

error: Content is protected !! Not allowed copy content from janadhvani.com