janadhvani

Kannada Online News Paper

ರಾಜ್ಯದ ಜನತೆಗೆ ಹತ್ತು ಕೆಜಿ ಅಕ್ಕಿ ರಾಜ್ಯ ಸರರ್ಕಾರ ನೀಡುವ ವಿಶ್ವಾಸವಿದೆ- ಝೈನ್ ಆತೂರು

ಸಿದ್ದರಾಮಯ್ಯ ಅವರು ಬಡವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿರುವಾಗ,ಪ್ರಧಾನಿಯವರು ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿರುವುದು ಖಂಡನೀಯ

ಮಂಗಳೂರು: ರಾಜ್ಯದ ಜನತೆಗೆ ಹತ್ತು ಕೆಜಿ ಅಕ್ಕಿಯನ್ನು ರಾಜ್ಯದ ಕಾಂಗ್ರೆಸ್ ಸರರ್ಕಾರ ನೀಡುವ ವಿಶ್ವಾಸ ನಮಗಿದೆ ಎಂದು ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ ಸಂಯೋಜಕ ಝೈನ್ ಆತೂರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಬಡ ಜನತೆಯ ಹೊಟ್ಟೆ ತುಂಬಿಸುವ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ, ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಬಡ ಜನರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿರುವುದು ಖಂಡನೀಯವಾಗಿದೆ.

ರಾಜ್ಯದ ಜನರು 25ಸಂಸದರನ್ನು ಆರಿಸಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಅ ನೈತಿಕತೆಯಿಂದಾದರೂ ರಾಜ್ಯದ ಜನತೆಗೆ ಕೇಂದ್ರ ಸರರ್ಕಾರ ಅಕ್ಕಿ ಒದಗಿಸುವ ಕಾರ್ಯ ಮಾಡಬೇಕು ಎಂದು ಝೈನ್ ಆತೂರು ಆಗ್ರಹಿಸಿದ್ದಾರೆ.

error: Content is protected !! Not allowed copy content from janadhvani.com