ಕಿನ್ಯಾ:ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುವ ಈ ವೇಳೆಯಲ್ಲಿ, SYS & SSF ಬೆಳರಿಂಗೆ ಕಿನ್ಯಾ, ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮವನ್ನು SYS ರಾಜ್ಯ ನಾಯಕರಾದ ಕೆ.ಎಚ್.ಇಸ್ಮಾಯಿಲ್ ಸಹದಿ ನೆರವೇರಿಸಿದರು.
SYS ಬೆಳರಿಂಗೆ ಅಧ್ಯಕ್ಷರಾದ ವಿ.ಎ. ಮಹಮ್ಮದ್ ಮುಸ್ಲಿಯಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಯೂನಿಟ್ ನ ಅಧ್ಯಕ್ಷ ಬಶೀರ್ ಕೂಡಾರ ಸ್ವಾಗತ ಭಾಷಣ ನಡೆಸಿದರು. ಸ್ವಾತಂತ್ರ ಹೋರಾಟ ಮತ್ತು ಈ ದಿನದ ಪವಿತ್ರತೆಯ ಬಗ್ಗೆ ಚುಟುಕು ಭಾಷಣವನ್ನು ಪಂಚಾಯತ್ ಸದಸ್ಯರಾದ ಫಾರೂಕ್ ಮಾಡಿದರು.
ಇದೇ ಕಾರ್ಯಕ್ರಮದಲ್ಲಿ 2021-22 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ SSLC ಮತ್ತು PUC ವಿಧ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಿತು.
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಫಯಾಜ್, SYS ಕಿನ್ಯ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಾಗ್, ಕೆ.ಸಿ.ಎಫ್ ನಾಯಕರಾದ ಶೌಕತ್ ತ್ವಾಯಿಫ್, ಮೂಸಾ ಕತರ್, ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಸಾದಿಕ್, ಕಲ್ಚರಲ್ ಕೌನ್ಸಿಲ್ ಕಾರ್ಯದರ್ಶಿ ನೌಮಾನ್ ಕೂಡಾರ, ಸಿದ್ದೀಕ್ ಕೂಡಾರ, SYS ಬೆಳರಿಂಗೆ ಪ್ರಧಾನ ಕಾರ್ಯದರ್ಶಿ ಹನೀಫ್, ಅಝೀಝ್ ಸಾಗ್, ಮೂಸಾ ಬದ್ರಿಯ ನಗರ ಮುಂತಾದ ಊರಿನ ಗಣ್ಯ ವ್ಯಕ್ತಿಗಳು ಹಾಗೂ ಸಂಘಟನೆಯ ಸಕ್ರೀಯ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿಯನ್ನು ವಿತರಿಸಿ, ಯೂನಿಟ್ ನ ಪ್ರಧಾನ ಕಾರ್ಯದರ್ಶಿ ನೌಫಲ್ ಅಭಿನಂದನೆ ಸಲ್ಲಿಸಿದರು.