janadhvani

Kannada Online News Paper

ಬಂಟ್ವಾಳ: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ರಿಂದ ಅಂಬ್ಯುಲೆನ್ಸ್ ಲೋಕಾರ್ಪಣೆ

ಬಂಟ್ವಾಳ :ಕರ್ನಾಟಕ ಮುಸ್ಲಿಂ ಜಮಾಅತ್ ಬಂಟ್ವಾಳ ತಾಲೂಕು ಸಮಿತಿಯ “ಸಹಾಯ್ ” ಇದರ ಅಧೀನದಲ್ಲಿ ಬಿಸಿರೋಡ್ ಸ್ಪರ್ಶಾ ಸಭಾಂಗಣ ದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎಪಿ ಉಸ್ತಾದರಿಂದ ನೂತನ ಆಂಬ್ಯುಲೆನ್ಸ್ ನ್ನು ಲೋಕಾರ್ಪಣೆ ಮಾಡಲಾಯಿತು.

ಕರ್ನಾಟಕ ಜಂ-ಇಯ್ಯತುಲ್ ಉಲಮಾ ಅದ್ಯಕ್ಷರಾದ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್, ಸಯ್ಯಿದ್ ಮದಕ ತಂಙಳ್, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ವಕ್ಫ್ ಬೋರ್ಡ್ ಚೀನಾ ಮೌಲಾನ NKM ಶಾಫೀ ಸಅದಿ ಬೆಂಗಳೂರು,
ಎಸ್ ವೈ ಎಸ್ ಜಿಲ್ಲಾ ಅಧ್ಯಕ್ಷರಾದ ಅಶ್ಅರಿಯ್ಯ ಸಖಾಫಿ, ಸಿರಾಜುದ್ದೀನ್ ಸಖಾಫಿ ಕನ್ಯಾನ, ತಾಲೂಕು ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಅನ್ವರ್ ಹಾಜಿ ಗೂಡಿನಬಳಿ ,ಕೆಸಿಎಫ್ ನಾಯಕರಾದ ಆಸೀಪ್ ಹಾಜಿ ಗೂಡಿನಬಳಿ
ಉಮರಾ ನಾಯಕರಾದ ಸಾಗರ್ ಮುಹಮ್ಮದ್ ಹಾಜೀ, ಶಾಹುಲ್ ಹಮೀದ್ ಉಜಿರೆ, ಮುಂತಾಝ್ ಅಲೀ ಕೃಷ್ಣಾಪುರ, ಬಶೀರ್ ಹಾಜೀ ಮಿತ್ತಬೈಲ್, ಅಬ್ದುಲ್ ರಶೀದ್ ಹಾಜೀ ವಗ್ಗ, ಎಸ್ ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ನವಾಝ್ ಸಖಾಪಿ ಅಡ್ಯಾರ್ ಪದವು, ಕಾರ್ಯದರ್ಶಿ ನೌಫಲ್ ಹರೇಕಳ,
ಕೋಶಾಧಿಕಾರಿ ಇಕ್ಬಾಲ್ ಮದ್ಯನಡ್ಕ, ಎಸ್ ಎಸ್ ಎಫ್ ಬಂಟ್ವಾಳ ಡಿವಿಶನ್ ಅಧ್ಯಕ್ಷರಾದ ಸಿನಾನ್ ಸಖಾಫಿ ಅಜಿಲಮೊಗರು, ಇಬ್ರಾಹಿಂ ಸಖಾಫಿ ಸೆರ್ಕಳ, ಮುನೀರ್ ಸಖಾಫಿ ಉಳ್ಳಾಲ
ಅಬೂಬಕ್ಕರ್ ನಚ್ಚಬೆಟ್ಟು, ರಫೀಕ್ ಕಿಸ್ವ, ಅಕ್ಬರ್ ಮದನಿ ಅಲಂಪಾಡಿ ಉಪಸ್ಥಿತರಿದ್ದರು.